ಸುದ್ದಿಬಿಂದು ಬ್ಯೂರೋ ವರದಿ
ಜೋಯಿಡಾ: ತಾಲೂಕಿನ ರಾಮನಗರ ಭಾಗದ ಶಾರದಾ ರಮೇಶ ಸೋಲೇಕರ ಎಂಬುವವರ ಮನೆ ಹಿಂದಿನ ಮಳೆಗಾಲದಲ್ಲಿ ಮನೆ ಮುರಿದು ಹಾಳಾದರೂ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ತಮ್ಮ ಸಮಸ್ಯೆಯನ್ನು ಶಾಸಕ ಆರ್ ವಿ ದೇಶಪಾಂಡೆ ಅವರ ಹತ್ತಿರ ಹೇಳಿದಾಗ ಗರಂ ಆದ ಅವರು ಸ್ಥಳದಲ್ಲೇ ಗಂಟೆಗಳ ಕಾಲ ನಿಂತು ಅಧಿಕಾರಿಗಳ ಮೈ ಚಳಿ ಬಿಡಿಸಿದ ಘಟನೆ ನಡೆಯಿತು.
ರಾಮನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ಮಹಿಳೆಯೊಬ್ಬರು ತಮಗೆ ಒಂದು ವರ್ಷದ ಹಿಂದೆ ಬಿದ್ದ ಮನೆಗೆ ಈ ವರೆಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ಎಂದರು. ಈ ಬಗ್ಗೆ ಕೂಡಲೇ ತಹಶಿಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳನ್ನು ಕರೆದು ಏಕೆ ಮನೆಗೆ ಪರಿಹಾರ ಸಿಕ್ಕಿಲ್ಲ ಎಂದು ವಿಚಾರಿಸಿದರು. ಈ ಬಗ್ಗೆ ಅಲ್ಲಿಯಶಾನಭಾಗ ರೆಹಮಾನ್ ನಮ್ಮ ಕೆಲಸ ನಾವು ಮಾಡಿದ್ದೇವೆ ಪರಿಹಾರ ತಲುಪಿಸುವುದು ನಮ್ಮ ಕೆಲಸ ಅಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ಈ ಬಗ್ಗೆ ತಕ್ಷಣ ಗರಂ ಆದ ಶಾಸಕರು ಏನು ಮಾತನಾಡುತ್,ತಿ ಮನೆ ಮುರಿದರೆ ಅದಕ್ಕೆ ಪರಿಹಾರ ತಲುಪಿಸುವ ಕೆಲಸ ನಿಮ್ಮದಲ್ಲವೇ, ನಿನ್ನ ಮನೆ ಮುರಿದರೆ ನೀನು ಸುಮ್ಮನೆ ಇರುತ್ತಿದ್ದೇಯಾ? ಸುಳ್ಳು ಹೇಳಬೇಡಿ, ನೀವು ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತಿ ಎಂದು ನನಗೆ ಗೊತ್ತಿದೆ. ನಿಜವಾಗಿಯೂ ಆ ಹೆಣ್ಣು ಮಗಳ ಮನೆಗೆ ಹಾನಿ ಆಗಿದೆ ಎಂದು ಗೊತ್ತಾದರೆ ನಿನ್ನನ್ನು ಸಸ್ಪೆಂಡ್ ಮಾಡಿಸುತ್ತೇನೆ. ಜೋಯಿಡಾ ತಾಲೂಕಿನ ಅಧಿಕಾರಿಗಳಿಗೆ ಇದು ನನ್ನ ಎಚ್ಚರಿಕೆ ಸರಿಯಾಗಿ ಕೆಲಸ ಮಾಡಿ ಬಡ ಜನರಿಗೆ ಮೋಸ ಮಾಡಬೇಡಿ ಕೂಡಲೇ ಕೆಲಸ ಮಾಡಿ ಎಂದು ಕಿಡಿಕಾರಿದರು.
ಜೋಯಿಡಾ ತಾಲೂಕಿನಲ್ಲಿ ಬಹಳಷ್ಟು ಜನರ ಮನೆಗಳು ಮಳೆ ಗಾಳಿಯಿಂದ ಹಾಳಾಗಿದೆ ಎಂದು ಅರ್ಜಿಗಳು ನೀಡಿದರೂ ಜನರಿಗೆ ಪರಿಹಾರ ಸಿಕ್ಕಿಲ್ಲ ಎನ್ನುವುದು ಜನರ ಮಾತಾಗಿದೆ.
ಇದನ್ನೂ ಓದಿ