ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ :ಐದನೇ ತರಗತಿ ವಿದ್ಯಾರ್ಥಿ ಓರ್ವ ಸರಿಯಾಗಿ ಗಣಿ ಲೆಕ್ಕ ಮಾಡಿಲ್ಲ ಎನ್ನುವ ಕಾರಣಕ್ಕೆ ಆ ಶಾಲೆಯ ಶಿಕ್ಷಕಿ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿ ಮೈ ಮೇಲೆ ಬಾಸುಂಡೆ ತರಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಹಳ್ಳಿಕಾರ್ ಕರ್ಕಿ ಹಿರಿಯ ‌ಪ್ರಾಥಮಿಕ ಶಾಲೆಯಲ್ಲಿ ನಡೆದಿರುವು ಬೆಳಕಿಗೆ ಬಂದಿದೆ.

ಐದನೆ ತರಗತಿ ಓದುತ್ತಿದ್ದ ವಿದ್ಯಾರ್ಥಿ ಓರ್ವ ಗಣಿತವನ್ನ ಸರಿಯಾಗಿ ಮಾಡಿಲ್ಲವೆಂದು ಸಿಟ್ಟಾದ ಶಿಕ್ಷಕಿ ವಿದ್ಯಾರ್ಥಿಗೆ ತಿದ್ದಿ ಪಾಠ ಮಾಡುವ ಬದಲು ಕೊಲಿನಿಂದ ಮನಸೋ ಇಚ್ಚೇ ಮೈ ಮೇಲೆ ಹೊಡೆದು ಬಾಸುಂಡೆ ಬರುಬಂತೆ ಮಾಡಿದ್ದಾರೆ. ಇದರಿಂದಾಗಿ ಆ ವಿದ್ಯಾರ್ಥಿಯ ಬೆನ್ನು ಬಾಸುಂಡೆಯಿಂದ ತುಂಬಿಕೊಂಡಿದ್ದು, ನೋವು ತಡಿದುಕೊಳ್ಳಲು ಸಾಧ್ಯವಾಗದಂತಾಗಿದೆ ಎನ್ನಲಾಗಿದೆ. ಇಷ್ಟೆಲ್ಲಾ ಮಾಡಿದ ಶಿಕ್ಷಕಿ ಮನೆಯವರಿಗೆ ಈ ವಿಚಾರ ಹೇಳ‌ ಬೇಡ ಯಾವುದೋ ಸಿಟ್ಟಿನಲ್ಲಿ ಈ ರೀತಿ ಆಗಿದೆ ಎಂದು ವಿದ್ಯಾರ್ಥಿಗೆ ಸಮಾಧಾನ ಮಾಡಿದ್ದಾರಂತೆ..

ಶಾಲೆಯಿಂದ ಮನೆಗೆ ಹೋದ ವಿದ್ಯಾರ್ಥಿ ನೋವು ತಡೆದುಕೊಳ್ಳಲಾಗದೆ.ಪಾಲಕರಿಗೆ ವಿಚಾರ ತಿಳಿಸಿದ್ದಾನೆ. ಬಳಿಕ ಪಾಲಕರು ಶಿಕ್ಷಕಿಯನ್ನ ಕೇಳಿದ್ದರೆ ಆತನಿಗೆ ಅಲರ್ಜಿಯಿಂದಾಗಿ ಮೈ ಕೆಂಪಾಗಿರಬೇಕು ಎಂದು ತಪ್ಪಿಸಿಕೊಳ್ಳುವ ಹೇಳಿಕೆ ನೀಡಿದ್ದಾರೆ. ಇಂದಿನಿಂದ ಪರೀಕ್ಷೆ ಆರಂಭವಾಗಿದ್ದು, ವಿದ್ದಾರ್ಥಿ ಪರೀಕ್ಷೆ ಬರೆಯಲು ಹೋಗದಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮುಂದೆ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದ್ದಾರೆಂದು ಕಾದು ನೋಡಬೇಕಿದೆ.

ಇದನ್ನೂ ಓದಿ