ನವದೆಹಲಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 9ತಿಂಗಳು ಬಳಿಕ ಭೂಮಿಗೆ ಮರಳಿದ ಭಾರತೀಯ ಮೂಲದ ಖಗೋಳಶಾಸ್ತ್ರಜ್ಞೆ ಸುನೀತಾ ವಿಲಿಯಮ್ಸ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.ಈ ಮೂಲಕ ಅವರನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಕೇರಳ ಕಾಂಗ್ರೆಸ್ ಘಟಕ, ಸುನೀತಾ ಅವರ ಸಂಬಂಧಿ ಹಾಗೂ ಗುಜರಾತ್‌ನ ಮಾಜಿ ಗೃಹ ಸಚಿವ ಹರೆನ್ ಪಾಂಡ್ಯಾ ಹತ್ಯೆಗೆ ಸಂಬಂಧಿಸಿದ ಮಾಧ್ಯಮ ವರದಿ ಭಾಗವೊಂದನ್ನು ಹಂಚಿಕೊಂಡು, ಸುನೀತಾ ಈ ಪತ್ರವನ್ನು ತಿರಸ್ಕರಿಸಬಹುದು ಎಂದು ವ್ಯಂಗ್ಯವಾಡಿದೆ.

ಮೋದಿ ಸುನೀತಾ ವಿಲಿಯಮ್ಸ್‌ಗೆ ಪತ್ರ ಬರೆದಿದ್ದಾರೆ. ಅವರು ಅದನ್ನು ತಿರಸ್ಕರಿಸಬಹುದು. ಯಾಕೆ ಗೊತ್ತಾ? ಸುನೀತಾ,ಹರೆನ್ ಪಾಂಡ್ಯಾ ಅವರ ಸಂಬಂಧಿ. ಗುಜರಾತ್‌ನ ಗೃಹ ಸಚಿವರಾಗಿದ್ದ ಪಾಂಡ್ಯಾ,ಗೋದರಾ ರೈಲು ದಹನ ಘಟನೆಯ ನಂತರ ಮೋದಿ ವಿರುದ್ಧ  ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.ಗಲಭೆಗಳ ಸಂದರ್ಭದಲ್ಲಿ ಮೋದಿ ಅವರ ಪಾತ್ರವನ್ನು ನ್ಯಾಯಮೂರ್ತಿ ವಿ.ಆರ್. ಕೃಷ್ಣಯ್ಯರ್ ಅವರಿಗೆ ಗುಪ್ತವಾಗಿ ತಿಳಿಸಿದ್ದಾರೆ. ಇದಾದ ಬಳಿಕ, ಪಾಂಡ್ಯಾ ಕೊಲೆಯಾದರು.

ಪಾಂಡ್ಯಾ ಹತ್ಯೆಯ ನಂತರ ಅನೇಕ ಸರಣಿ ಕೊಲೆಗಳು ನಡೆಯಿತು.ನ್ಯಾಯಮೂರ್ತಿ ಲೋಯಾ ಹತ್ಯೆಯಾದ ನಂತರ ಈ ಕೊಲೆಗಳು ನಿಂತವು. ಸುನೀತಾ ವಿಲಿಯಮ್ಸ್ ಬಗ್ಗೆ ಇದುವರೆಗೆ ಗಮನ ಹರಿಸದೆ ಇದ್ದ ಮೋದಿ, ಈಗ ಮಾತ್ರ ಅವರ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.

2003 ಮಾರ್ಚ್ 26 ರಂದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಹರೆನ್ ಪಾಂಡ್ಯಾ ಅವರನ್ನು ಅಹಮದಾಬಾದ್‌ನ ಲಾ ಗಾರ್ಡನ್ ಪ್ರದೇಶದಲ್ಲಿ ಗುಂಡಿಕ್ಕಿ ಕೊಲೆಯಾಯಿತು.

ಇದನ್ನೂ ಓದಿ