ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಅಧಿಕಾರಕ್ಕಾಗಿ ರಾಜ್ಯ ಕಾಂಗ್ರೇಸ್‌ನಲ್ಲಿ ದಿ‌ನ ಬೆಳಗಾದರೆ ಕಚ್ಚಾಟ ನಡೆಯುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗತ್ತಿಲ್ಲವೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾರವಾರದಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿ ಮಾತನಾಡಿದ ರೂಪಾಲಿ ನಾಯ್ಕ ಅವರು ಕಾಂಗ್ರಸ್‌ನ ಒಂದು ಬಣ ಸಿದ್ದರಾಮಯ್ಯ ಅವರನ್ನ ಸಿಎಂ ಖುರ್ಚಿಯಿಂದ ಕೇಳಗಿಳಿಸಬೇಕು ಎಂದು ಪ್ರಯತ್ನಿಸುತ್ತಿದ್ದರೆ. ಇನ್ನೊಂದು ಬಣ ಡಿಕೆ ಶಿವಕುಮಾರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ‌ ಕೇಳಗಿಳಿಸಬೇಕು ಎಂದು ಪ್ರಯತ್ನ ನಡೆಯುತ್ತಿದ್ದೆ.ಕಾಂಗ್ರೇಸ್‌ ನಾಯಕರಲ್ಲೇ ಹೊಂದಾಣಿಕೆ ಇಲ್ಲದಂತಾಗಿದೆ. ಅಧಿಕಾರದ ಕಚ್ಚಾಟದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲವೆಂದು ಕಾಂಗ್ರೇಸ್ ವಿರುದ್ದ ಆರೋಪಿಸಿದ್ದಾರೆ.

ಇದನ್ನೂ ಓದಿ