ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಮಹಾಕುಂಭಮೇಳಕ್ಕೆ ಪ್ರಯಾಗರಾಜ್‌ಗೆ ಹೋಗಲು ಸಾಧ್ಯವಾಗದ 57 ವರ್ಷದ ಗೌರಿ ಒಂದು ಅನನ್ಯ ಕಾರ್ಯವನ್ನು ಮಾಡಿದ್ದಾರೆ. ಅವರು ತಮ್ಮ ಹಿತ್ತಲಲ್ಲಿ 40ಅ..ಡಿ ಆಳದ ಬಾವಿಯನ್ನು ತೋಡಿ ‘ಗಂಗೆಯನ್ನು’ ಭೂಮಿಗೆ ತಂದಿದ್ದಾರೆ. ಇದು ಅವರ ಮೊದಲ ಪ್ರಯತ್ನವಲ್ಲ.

ಜಿಲ್ಲಾ ಆಡಳಿತದ ವಿರೋಧದ ನಡುವೆಯೂ, ಈ ಬಾವಿಯನ್ನು 2024ರಲ್ಲಿ ಗೌರಿ ಅಂಗನವಾಡಿ ಮಕ್ಕಳ ಮತ್ತು ಸಿಬ್ಬಂದಿಯ ದಾಹ ತಣಿಸಲು ಬಳಸಲಾಯಿತು.

“ಮಹಾಕುಂಭಕ್ಕೆ ಹೋಗಲು ಅದೃಷ್ಟ ಬೇಕು. ನನ್ನಿಂದ ಅದು ಸಾಧ್ಯವಿಲ್ಲ. ನಾನು ಇಲ್ಲಿ ಬಾವಿ ತೋಡಿ ಗಂಗೆಯನ್ನು ತರಲು ನಿರ್ಧರಿಸಿದೆ,” ಎಂದು ಅವರು ತಿಳಿಸಿದ್ದಾರೆ.

ಈಗ ಅವರು 40 ಅಡಿ ಆಳದ ಬಾವಿಯನ್ನು ತೋಡಿ, ಅದರಲ್ಲಿ ಸಾಕಷ್ಟು ನೀರು ದೊರಕಿರುವುದರಿಂದ ಸಂತೋಷಗೊಂಡಿದ್ದಾರೆ. “ಈ ತಿಂಗಳ ಕೊನೆಯಲ್ಲಿ ಮಹಾಶಿವರಾತ್ರಿಯ ದಿನ ಸ್ನಾನ ಮಾಡಲು ಯೋಚಿಸುತ್ತಿದ್ದೇನೆ,” ಎಂದು ಹೇಳಿದರು.

ಡಿಸೆಂಬರ್‌ನಲ್ಲಿ ಗೌರಿ ಮಹಾಕುಂಭಮೇಳದ ಬಗ್ಗೆ ಕೇಳಿಕೊಂಡರು, ಆದರೆ ಪ್ರಯಾಗರಾಜ್‌ಗೆ ಹೋಗಲು ಸಾಕಷ್ಟು ಹಣ ಇಲ್ಲ ಎಂದು ಅರಿತುಕೊಂಡರು. ಅದೇ ವೇಳೆ ಅವರು ಬಾವಿ ತೋಡಲು ನಿರ್ಧರಿಸಿ, ಡಿಸೆಂಬರ್ 15ರಂದು ಕೆಲಸ ಆರಂಭಿಸಿದರು.

ಕುಟುಂಬಸ್ಥರು ಮತ್ತು ನೆರೆಹೊರೆಯವರ ಪ್ರಕಾರ, ಅವರು ಪ್ರತಿದಿನ 6-8 ಗಂಟೆಗಳ ಕಾಲ ಬಾವಿ ತೋಡುವ ಮತ್ತು ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಗಲಿರುಳು ಪರಿಶ್ರಮದ ಬಳಿಕ, ಫೆಬ್ರವರಿ 15ರಂದು ಅವರು ಬಾವಿ ತೋಡುವುದನ್ನು ಪೂರ್ಣಗೊಳಿಸಿದ್ದಾರೆ.

ಫೆ 19ಕ್ಕೆ ಶಿವಾಜಿ ಜಯಂತಿ ಆಚರಣೆ
ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಶ್ರೀಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಫೆ.19 ರಂದು ನಗರದಲ್ಲಿ ಬೃಹತ್ ಮೆರವಣಿಗೆ ಹಾಗೂ ನಗರಸಭೆ ಉದ್ಯಾನವನದಲ್ಲಿರುವ ಪುತ್ತಳಿಗೆ ಹಾಲಿನ ಅಭಿಷೇಕ ಮಾಡಿ ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಮಾಜಿ ನಗರಸಭಾ ಸದಸ್ಯ ಸತೀಶ ಕೊಳಂಬಕರ್ ಹೇಳಿದರು.

ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಭಗತ್ ಸಿಂಗ್ ಸೇನೆ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿ ಕಮಿಟಿವತಿಯಿಂದ ಛತ್ರಪತಿ ಶಿವಾಜಿ ಮಹರಾಜರ ಜಯಂತಿಯನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ. ನಗರಸಭೆ ಬಳಿಯ ಉದ್ಯಾನವನದಲ್ಲಿ ಬೆಳಿಗ್ಗೆ 9.30 ಪುತ್ತಳಿಗೆ ಪೂಜೆ ಮಾಡಿ ಹಾಲಿನ ಅಭಿಷೇಕ ಮಾಡಲಾಗುವುದು.

ಮಧ್ಯಾಹ್ನ 3.30 ಗಂಟೆಗೆ ಬಾಡದ ಮಹಾದೇವ ದೇವಸ್ಥಾನದಿಂದ ಬೃಹತ್ ಬೈಜ್ ರ್ಯಾಲಿ ನಡೆಸಲಾಗುವುದು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹೇಳಿದರು.
ಈ ವೇಳೆ ಮನೋಜ್ ನಾಯ್ಕ, ಓಂಕಾರ್ ಅಂಕೋಲೆಕರ್, ಪ್ರಶಾಂತ, ಸಿದ್ದಾರ್ಥಪೆಡ್ನೇಕರ್, ಸಂತೋಷ ನಾಯ್ಕ, ಸೂರ್ಯಕಾಂತ ಕಳಸ, ಗಜಾನನ ನಾಯ್ಕ, ಗಣೇಶ ನಾಯರ್ ಇದ್ದರು.