ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ಈಗಾಗಲೇ ಗ್ರಾಮೀಣ ಭಾಗದಲ್ಲಿ ಕ್ರೀಡೆ.ಮನರಂಜನಾ ಕಾರ್ಯಕ್ರಮಗಳ ಜೊತೆ ಜೊತೆಗೆ ಹತ್ತು ಹಲವಾರು ಕಾರ್ಯಕ್ರಮಗಳು ಜೋರಾಗಿದೆ. ಆದರೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಸಕರಿಗಿಂತ ಹೆಚ್ಚಾಗಿ ಸೂರಜ್ ನಾಯ್ಕ ಸೋನಿ ಸೇರಿದಂತೆ ಉಳಿದ ನಾಯಕರೆ ಹೆಚ್ಚಿನ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮಿಂಚುತ್ತಿದ್ದಾರೆ.
ಕುಮಟಾ ಕ್ಷೇತ್ರದ ತುಂಬಾ ಇದೀಗ ನಿತ್ಯವೂ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಶಾಸಕರಿಗೆ ಆಹ್ವಾನ ನೀಡಿದಂತೆ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಸೇರಿದಂತೆ ಇನ್ನೂಳಿದ ಮಖಂಡರಾಗಿರುವ ಕಾಂಗ್ರೇಸ್ನ.ಮಂಜುನಾಥ ಎಲ್ ನಾಯ್ಕ, ಭಾಸ್ಕರ್ ಪಟಗಾರ, ಪ್ರದೀಪ್ ನಾಯಕ,ರವಿಕುಮಾರ ಶೆಟ್ಟಿ, ಶಾರದಾ ಶೆಟ್ಟಿ, ನಿವೇದಿತ್ ಆಳ್ವ, ಭುವನ್ ಭಾಗ್ವತ್ ಸೇರಿದಂತೆ ಇನ್ನೂ ಪ್ರಮುಖ ಮುಖಂಡರನ್ನ ಕ್ಷೇತ್ರದ ಜನ. ಪ್ರತಿನಿತ್ಯವೂ ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಲೆ ಇದ್ದಾರೆ.
ಆದರೆ ಈ ಎಲ್ಲಾ ಕಾರ್ಯಕ್ರಮಕ್ಕೆ ಶಾಸಕರಿಗಿಂತ ಹೆಚ್ಚಾಗಿ ಈ ಉಳಿದ ಮುಖಂಡರೆ ಹೆಚ್ಚಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾಸಕರಿಗೆ ಆಹ್ವಾನ ನೀಡಿದರೂ ಸಹ ಕೊನೆ ಕ್ಷಣದವರೆಗೂ ಸಂಘಟಕರಿಗೆ ಬರುವುದಾಗಿ ಆಶ್ವಾಸನೆ ನೀಡಿ ಕೊನೆ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗದೆ ದೂರು ಉಳಿಯುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಹೀಗಾಗಿ ಶಾಸಕರು ಇರಬೇಕಾದ ಹೆಚ್ಚಿನ ವೇದಿಕೆಯಲ್ಲಿ ಈ ನಾಯಕರೆ ಆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಶಾಸಕರು ಯಾವ ಕಾರಣಕ್ಕಾಗಿ ಹೆಚ್ಚಾಗಿ ವೇದಿಕೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳತ್ತಾ ಇಲ್ಲ ಎನ್ನುವುವ ಚರ್ಚೆ ಕ್ಷೇತ್ರದಲ್ಲಿ ಜೋರಾಗಿ ಕೇಳಿ ಬರುತ್ತಿದೆ
ಇದನ್ನೂ ಓದಿ