ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಗೋವಾದಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಂಕೋಲಾ ಪೊಲೀಸರು ನಡೆಸಿದ ದಾಳಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಸಂತೋಷ ಲಮಾಣಿಯನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅಮಾನತ್ ಮಾಡಿ ಆದೇಶಿಸಿದ್ದಾರೆ.
ಹಳಿಯಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಪ ಲಮಾಣಿ, ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆಯ ದಿವಾಕರ ಆರ್. ಇರಯ್ಯ ಕೃಷ್ಣಪ್ಪ ಎಂಬುವವರು ಸೇರಿಕೊಂಡು ಸ್ವೀಪ್ಟ್ ಕಾರನಲ್ಲಿ ಗೋವಾದಿಂದ 80. ಸಾವಿರ ಮೌಲ್ಯದ ಮದ್ಯವನ್ನ ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ದಾಳಿ ನಡೆಸಿದ ಅಂಕೋಲಾ ಪೊಲೀಸರು ಹಟ್ಟಿಕೇರಿತ ಟೋಲ್ ಗೇಟ್ ಬಳಿ ಹಳಿಯಾಳ ಠಾಣೆಯ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಸೇರಿ ಮೂವರನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಅಕ್ರಮ ಚಟುವಟಿಕೆಯಲ್ಲಿ ನೇರವಾಗಿ ಬಾಗಿಯಾಗಿರುವ ಸಂತೋಷ ಲಮಾಣಿಯನ್ನ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ..
ಸಂತೋಷ ಲಮಾಣಿಗೆ ಜಾಮೀನು
ಅಕ್ರಮ ಗೋವಾ ಮದ್ಯಸಾಗಾಟದಲ್ಲಿ ಬಂಧನಕ್ಕೆ ಒಳಗಾಗಿದ್ದ ಹಳಿಯಾಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸಂತೋಷ ಲಮಾಣಿಯನ್ನ ಅಂಕೋಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ ಬಂಧಿತ ಆರೋಪಿತನಿಗೆ ಜಾಮೀನು ಮಂಜೂರಿ ಮಾಡಿ ಬಿಡುಗಡೆ ಗೊಳಿಸಿದೆ.ಈ ಹಿಂದೆ ಕೂಡ ಈತ ಅಕ್ರಮ ಮದ್ಯ ಸಾಗಾಟ ಮಾಡುವ ವೇಳೆ ಗೋಕರ್ಣ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ,
ಇದನ್ನೂ ಓದಿ