ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಗೋವಾದಿಂದ‌ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ತಮ್ಮ ಇಲಾಖೆಯ ಸಿಬ್ಬಂದಿಯನ್ನೆ ಬಂಧಿಸಿರುವ ಘಟನೆ ರಾಷ್ಟೀಯ ಹೆದ್ದಾರಿ 66ರ ಹಟ್ಟಿಕೇರಿ‌ ಟೋಲ್‌‌ಗೇಟ್ ಬಳಿ ನಡೆದಿದೆ.

ಸದ್ಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಪ ಲಮಾಣಿ,   ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆಯ ದಿವಾಕರ ಆರ್. ಇರಯ್ಯ ಕೃಷ್ಣಪ್ಪ (40) ಅವರನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಇವರು KA42, M-2190 ನಂಬರ್‌ನ  ಸ್ವಿಫ್ಟ್ ಕಾರಿನಲ್ಲಿ ಸುಮಾರು 80 ಸಾವಿರ ಮೌಲ್ಯದ ಅಕ್ರಮ ಗೋವಾ ಮದ್ಯವನ್ನ ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗಳಿಗೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ತಿಳಿದ ಅಂಕೋಲಾ‌ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನದಲ್ಲಿದ್ದ ಇಬ್ಬರನ್ನ ಸ್ಥಳದಲ್ಲೇ ಬಂಧಿಸಿದ್ದು, ಇನ್ನೋರ್ವ ಆರೋಪಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಸಂತೋಷ ಲಮಾಣಿ ಎಂಬಾತ ಬಂಧನದಿಂದ ತಪ್ಪಿಸಿಕೊಂಡು ಬೈಕ್ ಮೇಲೆ ತೆರಳಿದ್ದ ಎನ್ನಲಾಗಿದೆ. ಆತನ ಬೆನ್ನಟ್ಟಿದ್ದ ಅಂಕೋಲಾ‌ ಪೊಲೀಸರು ಕಾರವಾರ ತಾಲೂಕಿನ ಅಸ್ನೋಟಿ ಬಳಿ ತಮ್ಮ ಇಲಾಖೆಯ ಸಿಬ್ಬಂದಿಯನ್ನ ಬಂಧಿಸಿ ಎಳೆತಂದಿದ್ದಾರೆ.

ಈತ ಕದ್ರಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಸಹ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟಮಾಡುವ ಸಮಯದಲ್ಲಿ ಗೋಕರ್ಣ‌‌ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಕೆಲ ಗಂಟೆಯಲ್ಲೇ ಜಾಮೀನಿನ ಮೇಲೆ‌ ಹೊರಬಂದಿದ್ದ, ನಂತರದಲ್ಲಿ ಆತನಿಗೆ ಹಳಿಯಾಳ ಠಾಣೆಗೆ ವರ್ಗಾವಣೆ‌ ಮಾಡಲಾಗಿತ್ತು. ಆದರೂ ಸಹ ಈತ ಸರಕಾರದ ಕರ್ತವ್ಯದಲ್ಲಿದ್ದರೂ ಅಕ್ರಮ ದಂಧೆಯನ್ನ ನಿಲ್ಲಿಸಿರಲಿಲ್ಲ. ಇದೀಗ ಮತ್ತೆ ಮದ್ಯಸಾಗಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಾಗಿದ್ದಾನೆ.

ಪೊಲೀಸ್ ಇಲಾಖೆಯಲ್ಲಿ ಇದ್ದು, ನಿರಂತರವಾಗಿ ಅಕ್ರಮ ಚಟುವಟಿಕೆಯಲ್ಲಿ ನಿರಂತನಾಗಿದ್ದು, ಈತನ ಕಳ್ಳ ದಂಧೆಯಿಂದಾಗಿ ಜಿಲ್ಲೆಯ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ. ಇನ್ನಾದ್ದರೂ ಅಕ್ರಮ‌ ದಂಧೆಕೋರ ಸಂತೋಷ ಲಮಾಣಿ ವಿರುದ್ಧ ಅದ್ಯಾವ ಕಠಿಣ ಕ್ರಮ ಆಗಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ