ಸುದ್ದಿಬಿಂದು ಬ್ಯೂರೋ ವರದಿ (Suddibindu Digital News)
ಉಳ್ಳಾಲ:ರಾಜ್ಯದ ಅತ್ಯಂತ ದೊಡ್ಡ ದರೋಡೆ ಪ್ರಕರಣವೆಂದು ಕರೆಯಲಾಗಿರುವ ಕೋಟೇಕಾರು ಬ್ಯಾಂಕ್ ದೋಚನೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಶನಿವಾರ (ಫೆಬ್ರವರಿ 01)ಪೊಲೀಸರಿಂದ ಶೂಟೌಟ್ ಮಾಡಲಾಗಿದೆ.

ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ, ಮುಂಬೈನ ಧಾರಾವಿಯ ಮುರುಗಾಂಡಿ ಅವರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಘಟನೆ ಶನಿವಾರ ಮಧ್ಯಾಹ್ನ ಕೋಟೇಕಾರು ಅಜ್ಜಿನಡ್ಕದಲ್ಲಿ ನಡೆದಿದೆ.

ಪೊಲೀಸರು ಆರೋಪಿಯನ್ನು ಹುಡುಕಾಟ ನಡೆಸಲು ಮುರುಗಾಂಡಿಯನ್ನು ಕೋಟೇಕಾರಿಗೆ ಕರೆದೊಯ್ದಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ, ಪೊಲೀಸರು ಗುಂಡು ಹಾರಿಸಿದ್ದಾರೆ..

ಜನವರಿ 17ರಂದು, ಮುಂಜಾನೆ ಆದ್ಯಂತ, ಕೋಟೇಕಾರು ಕೃಷಿ ಸೇವಾ ಸಹಕಾರಿ ಸಂಘದ ಕೆ.ಸಿ. ರಸ್ತೆ ಶಾಖೆಯಲ್ಲಿ ದರೋಡೆ ನಡೆದಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದರು. ಇನ್ನೊಬ್ಬ ಆರೋಪಿ ಕನನ್ ಮಣಿ ಸಹ ತಪ್ಪಿಸಿಕೊಳ್ಳಯ ಪ್ರಯತ್ನಿಸಿದಾಗ, ಪೊಲೀಸರು ಗುಂಡು ಹಾರಿಸಿ ಆರೋಪಿಯನ್ನ ಬಂಧಿಸಿದ್ದಾರೆ..

2016ರಲ್ಲಿ ಮುಂಬೈ ಹಣಕಾಸು ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ 36 ವರ್ಷದ ಮುರುಗಾಂಡಿ ತೆವರ ವಿರುದ್ಧ ಮುಲುಂಡ್ ಸೇರಿದಂತೆ ಇತರ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ