ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನೌಕಾನೆಲೆಯ ಅನ್ಯಭಾಷಿಕರ ದೌರ್ಜನ್ಯದಿಂದಾಗಿ ಕಾರವಾರದ ಜನ ಸಂಪೂರ್ಣವಾಗಿ ಜಾಗ ಖಾಲಿ ಮಾಡುವ ದಿನ ಬಹಳ ದೂರವಿಲ್ಲವೆಂದು ಕರ್ನಾಟಕ ರಕ್ಷಣಾವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಎಚ್ಚರಿಕೆ ನೀಡಿದ್ದಾರೆ.
ಕಾರವಾರದಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಭಾಸ್ಕರ ಪಟಗಾರ ಮಾತನಾಡಿ. ಇತ್ತೀಚೆಗೆ ಅಯ್ಯಪ್ಪ ಮಾಲಾದಾರಿಗಳ ಮೇಲೆ ನೌಕಾನೆಲೆಯ ಅನ್ಯಭಾಷಿಕರು ಹಲ್ಲೆ ಮಾಡಿರುವುದು ಖಂಡನೀಯ, ಇದೆ ರೀತಿ ಮೊದಲಿನಿಂದಲ್ಲೂ ಸ್ಥಳೀಯ ಮೀನುಗಾರರ ಮೇಲೆ ದೌರ್ಜನ್ಯ ನಡೆಸಿಕೊಂಡು ಬರುತ್ತಿದ್ದಾರೆ.ಇದು ಇಲ್ಲಿಗೆ ನಿಲ್ಲಬೇಕು..ಪದೆ ಪದೆ ದೌರ್ಜನ್ಯ ಮುಂದುವರೆದರೆ ಕಾರವಾರದ ಜನ ಜಾಗ ಖಾಲಿ ಮಾಡುವ ಸಮಯ ಬಂದರು ಅಚ್ಚರಿ ಪಡಬೇಕಾಗಿಲ್ಲವೆಂದು ಭಾಸ್ಕರ ಪಟಗಾರ ಎಚ್ಚರಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಜನ ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಗಾಗಿ ಸಾಕಷ್ಟು ನೆಲ ಜಲ ಉದ್ಯೋಗವನ್ನ ತ್ಯಾಗ ಮಾಡಿದ್ದಾರೆ ಸೀಬರ್ಡ್ ಕೈಗಾ ಕೊಂಕಣ ರೈಲ್ವೆ ಇನ್ನೂ ಅನೇಕ ರೀತಿಯ ಯೋಜನೆಗಳಿಂದ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ ಆಗಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡಿದ ಕರಾವಳಿ ಭಾಗದ ಜನತೆಗೆ ಇತ್ತೀಚಿನ ದಿನಗಳಲ್ಲಿ ನೌಕಾನೆಲೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಸ್ಥಳೀಯರಿಗೆ ಮೀನುಗಾರರಿಗೆ ಸಾಕಷ್ಟು ಜನರಿಗೆ ಹೊರಗಿನ ಅನ್ಯಭಾಷೆಕಾರ ಹಾವಳಿಯಿಂದ ಉದ್ಯೋಗಿಗಳು ಮತ್ತು ಅಧಿಕಾರಿಗಳಿಂದ ಸ್ಥಳೀಯ ಜನರ ಮೇಲೆ ದಬ್ಬಾಳಿಕೆ ಆಗುತ್ತಿದೆ.
ದೇಶದ ಹಿತದೃಷ್ಟಿಯಿಂದ ತ್ಯಾಗ ಮಾಡಿದ ಕರಾವಳಿ ಭಾಗದ ಅದರಲ್ಲೂ ವಿಶೇಷವಾಗಿ ಕಾರವಾರ ಅಂಕೋಲಾ ಜನರಿಗೆ ನೌಕಾನೆಲೆಯ ಸಿಬ್ಬಂದಿಗಳು ಕಿರುಕುಳ ಕೊಡುತ್ತಿರುವುದನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಕೂಡಲೇ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಗೆ ಜಿಲ್ಲಾಧಿಕಾರಿಗಳು ಪತ್ರ ಬರೆದು ಕ್ರಮ ಕೈಗೊಳ್ಳಬೇಕು ಹೀಗೆ ಮುಂದುವರಿದರೆ ನೌಕನೆಲೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗಮನಿಸಿ