ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು: ಮಟ ಮಟ ಮಧ್ಯಾಹ್ನವೆ ಬ್ಯಾಂಕ್ ಒಂದಕ್ಕೆ ನುಗ್ಗಿದ ದರೋಡೆಕೋರರು ಗನ್ ತೋರಿಸಿ ಬ್ಯಾಂಕ್ ಲಾಕರಿನಲ್ಲಿದ್ದ ಚಿನ್ನಾಭರಣ ಹಾಗೂ 10ಕೋಟಿಗೂ ಅಧಿಕ ಹಣವನ್ನ ದೋಚಿ ಪರಾರಿಯಾಗಿರುವ ಘಟನೆ ಮಂಗಳೂರಿನ ಕೆಸಿ ರೋಡ್‌ನಲ್ಲಿ ನಡೆದಿದೆ.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಶಾಖೆ ನುಗ್ಗಿದ ಮುಸುಕುದಾರಿಗಳುಕಚೇರಿಯಲ್ಲಿದ್ದವರಿಗೆ ಗನ್ ತೋರಿಸಿ ಬ್ಯಾಂಕ್‌‌ನಲ್ಲಿದ್ದ ಲಾಕರ್ ಓಪನ್ ಮಾಡಿಸಿ ಅದರಲ್ಲಿದ್ದ ಚಿನ್ನಾಭರಣ ಹಾಗೂ 10 ಕೋಟಿಗೂ ಹೆಚ್ಚಿನ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.ಎರಡು ದಿನಗಳಿಂದ ಬ್ಯಾಂಕ್‌‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದುರಸ್ಥಿಯಲ್ಲಿತ್ತು.ಹೀಗಾಗಿ ಬ್ಯಾಂಕ್ ಬಗ್ಗೆ ತಿಳಿದವರಿಂದಲೇ ದರೋಡೆ ಕೃತ್ಯ ಎಸೆಗಿರಬಹುದು ಎಂದು ಶಂಕಿಸಲಾಗಿದೆ.

ಆರೋಪಿಗಳ ಬಂಧನಕ್ಕಾಗಿ ತಂಡಗಳನ್ನ ರಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.ಘಟನೆಗೆ ಸಂಬಂಧಿಸಿ ಸಿ ಎಂ ಸಿದ್ಧರಾಮಯ್ಯ ಸಹ ಪ್ರತಿಕ್ರೀಯೆ ನೀಡಿದ್ದು, ತಕ್ಷಣ ಆರೋಪಿಗಳನ್ನ ಬಂಧಿಸುವಂತೆ ಸೂಚಿಸಿದ್ದಾರೆ.

ಗಮನಿಸಿ