ಸುದ್ದಿಬಿಂದು ಬ್ಯೂರೋ ವರದಿ
ತಿರುಪತಿ: ತಿರುಪತಿಯಲ್ಲಿ ಭೀಕರ ಗೊಂದಲ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ತಿರುಪತಿಯ ವೈಕುಂಠ ದ್ವಾರ ದರ್ಶನಕ್ಕಾಗಿ ಭಕ್ತರು ಟಿಕೆಟ್ ತೆಗೆದುಕೊಳ್ಳುತ್ತಿದ್ದ ವೇಳೆ ಈ ಗೊಂದಲ ಸಂಭವಿಸಿದ್ದು, ಪರಿಣಾಮವಾಗಿ ಹಲವು ಸಾವು ಮತ್ತು ದುಃಖ ಉಂಟಾಗಿದೆ. ಸಾವಿರಾರು ಜನರು ಟಿಕೆಟ್ ಪಡೆಯಲು ಒಮ್ಮೆಲೇ ಮುಗಿಬಿದ್ದ ಕಾರಣ ಈ ದುರಂತ ಸಂಭವಿಸಿದೆ.

ಪ್ರಾರಂಭದಲ್ಲಿ ಒಬ್ಬ ಮಹಿಳೆಯ ಸಾವು ವರದಿಯಾಗಿತ್ತು, ಆದರೆ ನವೀಕೃತ ಮಾಹಿತಿಯ ಪ್ರಕಾರ ಈಗಾಗಲೇ 6 ಮಂದಿ ಮೃತಪಟ್ಟಿದ್ದಾರೆ. ಉಳಿದವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಮೃತಪಟ್ಟ ಮಹಿಳೆ ತಮಿಳುನಾಡಿನ ಸೇಲಂ ಮೂಲದವರೆಂದು ಹೇಳಲಾಗಿದೆ.

ಜನವರಿ 10ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಟಿಕೆಟ್ ವಿತರಣೆಯನ್ನು ನಾಳೆ ಬೆಳಗಿನ ಪ್ರಾರಂಭದಿಂದ ತಿರುಪತಿಯ ಕೌಂಟರ್‌ಗಳಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ಸಾವಿರಾರು ಜನರು ಟಿಕೆಟ್ ಕೌಂಟರ್‌ಗೆ ಒಮ್ಮೆಲೇ ಧಾವಿಸಿದ್ದರಿಂದ ಗೊಂದಲ ಉಂಟಾಗಿದೆ. ಈ ಘಟನೆಯ ಭೀಕರ ದೃಶ್ಯಗಳ ವಿಡಿಯೋಗಳು ಕೂಡ ದಾಖಲಾಗಿವೆ. ನೆಲದಲ್ಲಿ ಬಿದ್ದವರನ್ನು ಮರುಜೀವಿಸಲು ಪೊಲೀಸರು CPR ನೀಡುತ್ತಿರುವ ವಿಡಿಯೋಗಳೂ ಶರೀಕವಾಗಿದೆ. ಸುಮಾರು 25 ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ರೂಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಬೆಳಗ್ಗೆ 5 ಗಂಟೆಯಿಂದ ಟಿಕೆಟ್ ವಿತರಣೆ ಪ್ರಾರಂಭವಾಗುವುದಾಗಿ ತಿಳಿಸಿದೆ. ಜನವರಿ 10, 11, 12 ರಂದು ವೈಕುಂಠ ದ್ವಾರ ದರ್ಶನಕ್ಕಾಗಿ 1,20,000 ಸೇವಾ ದರ್ಶನ ಟಿಕೆಟ್ ವಿತರಿಸಲಾಗುವುದಾಗಿ ತಿಳಿಸಲಾಗಿದೆ. ಟಿಟಿಡಿ 9 ಕೇಂದ್ರಗಳಲ್ಲಿ 94 ಕೌಂಟರ್‌ಗಳಲ್ಲಿ ಟಿಕೆಟ್ ವಿತರಿಸಲು ನಿರ್ಧರಿಸಿದೆ. ಟಿಕೆಟ್ ವಿತರಣಾ ಪ್ರಕ್ರಿಯೆ ಪ್ರಾರಂಭವಾಗಲು ಇನ್ನೂ ಸಮಯವಿದ್ದರೂ, ಪೊಲೀಸರು ಕ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು. ರಸ್ತೆಗಳಲ್ಲಿ ಭಕ್ತರು ಗೋವಿಂದ ಭಜನೆ ಹಾಡುತ್ತ ನಿಂತಿದ್ದರು. ಟಿಟಿಡಿ ಪ್ರತಿ ದಿನ 40,000 ಟಿಕೆಟ್ ವಿತರಿಸಲು ತೀರ್ಮಾನಿಸಿತ್ತು.

ಕಾಲ್ತುಳಿತಕ್ಕೆ ಕಾರಣವೇನು?
ಉಚಿತ ದರ್ಶನ ಟಿಕೆಟ್‌ಗಾಗಿ ಬಹಳಷ್ಟು ಭಕ್ತರು ಕೌಂಟರ್‌ ಮುಂದೆ ಸೇರಿದ್ದರು. ಗುರುವಾರ ಬೆಳಗ್ಗೆ 5 ಗಂಟೆ ಬದಲು ಮಧ್ಯರಾತ್ರಿ 12 ಗಂಟೆಯಿಂದಲೇ ಟಿಕೆಟ್ ವಿತರಣೆ ಪ್ರಾರಂಭವಾಗುವುದೇ ಎಂಬ ಮಾಹಿತಿ ಹರಡಿದ ಕಾರಣ ಗೊಂದಲಕ್ಕೆ ಕಾರಣವಾಗಿದೆಯೆಂದು ಹೇಳಲಾಗಿದೆ.

ಗಮನಿಸಿ