ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಭಾವಿಕೊಡ್ಲ, ದುಬ್ಬನಸಶಿ, ಗಂಗೆಕೊಳ್ಳ,ನಾಡುಮಾಸ್ಕೇರಿ ಭಾಗದಲ್ಲಿ ಸರಕಾರಿ ಜಾಗವನ್ನ ಅತಿಕ್ರಮಿಸಿ ರೆಸಾರ್ಟ್,ಹೋಂ ಸ್ಟೇ ನಿರ್ಮಣವಾಗುತ್ತಿರುವ ಬಗ್ಗೆ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ಸದಸ್ಯರು ಸಹಾಯಕ ಕಮಿಷನರ್ ಅವರಿಗೆ ಮನವಿ ನೀಡಿದ ಬೆನ್ನಲ್ಲೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೆಸಾರ್ಟ್ ಮಾಲೀಕರಿಗೆ ಬಿಸಿಮುಟ್ಟಿದ್ದಾರೆ.

ಸಾರ್ವಜನಿಕ ರಸ್ತೆ, ಕಡಲತೀರ ಹಾಗೂ ಸರ್ಕಾರಿ ಭೂಮಿ ಅತಿಕ್ರಮಿಸಿ ರೆಸಾರ್ಟ ಹಾಗೂ ಹೋಂ ಸ್ಟೇ ನಡೆಸುತ್ತಿರುವವರ ವಿರುದ್ಧ ಮೊನ್ನೆಯಷ್ಟೆ ನಾಡುಮಾಸ್ಕೇರಿ ಗ್ರಾ ಪಂ ಸದಸ್ಯರು ಕುಮಟಾ ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಿ ಒಂದು ವಾರದೊಳಗೆ ರೆಸಾರ್ಟ್ ಮಾಲೀಕರ ವಿರುದ್ಧ ಕ್ರಮಕ್ಕೆ‌ಮುಂದಾಗದಿದ್ದಲ್ಲಿ ಸಾಮೂಹಿಕ ರಾಜೀನಾಮೆ‌ ನೀಡುವುದಾಗಿ ಎಚ್ಚರಿಸಿದ್ದರು. ಇದರ ಬೆನ್ನಲ್ಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಜುಟ್ಟುಸಿದ್ದಾರೆ.ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಹಾಗೂ ತಹಶೀಲ್ದಾರ್ ಸತೀಶ ಗೌಡ ಕಡಲತೀರಗಳಿಗೆ ತೆರಳಿ ಅನಧಿಕೃತ ಮಳಿಗೆಗಳನ್ನು ಲೆಕ್ಕ ಮಾಡಿದರು.

ಭಾವಿಕೊಡ್ಲ ಗ್ರಾಮದ ದುಬ್ಬನಸಶಿ, ಗಂಗೆಕೊಳ್ಳ ಹಾಗೂ ನಾಡುಮಾಸ್ಕೇರಿಯಲ್ಲಿ ಅಧಿಕಾರಿಗಳು ಸಂಚಾರ ನಡೆಸಿದರು. ಯಾವ ಯಾವ ರೆಸಾರ್ಟ್ ಎಷ್ಟು ಕ್ಷೇತ್ರದಲ್ಲಿದೆ? ಯಾರ ಹೆಸರಿನಲ್ಲಿ ನೊಂದಣಿ ಆಗಿದೆ? ಎಂದು ಮಾಹಿತಿ ಪಡೆದರು. ಈ ಬಗ್ಗೆ ಖಚಿತ ಮಾಹಿತಿ ಸಿಗದ ಕಾರಣ ಕ್ಷೇತ್ರದ ಸರ್ವೇ ನಡೆಸಿ ಎರಡು ದಿನದಲ್ಲಿ ವರದಿ ನೀಡುವಂತೆ ಭೂ ಮಾಪನಾ ಇಲಾಖೆಗೆ ಸೂಚಿಸಿದರು. `ಸರ್ಕಾರಿ ಜಾಗದಲ್ಲಿ ಖಾಸಗಿ ಕಟ್ಟಡಗಳಿದ್ದರೆ ಅದನ್ನು ತೆರವು ಮಾಡಲಾಗುವುದು’ ಎಂದು ಈ ವೇಳೆ ತಿಳಿಸಿದರು.

`ಅಕ್ರಮ ರೆಸಾರ್ಟ ಹಾಗೂ ಹೋಂ ಸ್ಟೇ’ಗಳು ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಜನರ ಓಡಾಟಕ್ಕೂ ಇದರಿಂದ ಸಮಸ್ಯೆಯಾಗಿದೆ’ ಎಂದು ಗ್ರಾಮ ಪಂಚಾಯತಗೆ ಅನೇಕರು ದೂರು ಸಲ್ಲಿಸಿದ್ದರು. ಹೀಗಾಗಿ ಗ್ರಾಮ ಪಂಚಾಯತ ಸದಸ್ಯರು ಈ ಬಗ್ಗೆ ವಿವಿಧ ಇಲಾಖೆಗೆ ಪತ್ರ ಬರೆದಿದ್ದು, ಗುರುವಾರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಸಮಸ್ಯೆ ಬಗೆಹರಿಯದೇ ಇದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಎಚ್ಚರಿಸಿದ್ದರು.

ಗಮನಿಸಿ