ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಗಂಗೆಕೊಳ್ಳ ಹಾಗೂ ದುಬ್ಬನಶಸಿ ಭಾಗದಲ್ಲಿ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ‌್‌ಗಳಿದ್ದು, ಅನಧಿಕೃತವಾಗಿರುವ ಹೋಂ ಸ್ಟೇ’ ಹಾಗೂ ರೇಸಾರ್ಟ್‌ಗಳನ್ನ‌ ತೆರವು ಮಾಡುವಂತೆ ನಾಡುಮಾಸ್ಕೇರಿ ಗ್ರಾಮ ಪಂಚಾಯತ ಸದಸ್ಯರು ಸಹಾಯಕ‌‌ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದ್ದು,
ವಾರದ ಒಳಗೆ ಅನಧಿಕೃತ ತೆರವು ಮಾಡದೇ ಇದ್ದರೆ ಪಂಚಾಯತನ ಎಲ್ಲಾ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ನೂರಾರು ಅನಧಿಕೃತವಾಗಿರುವ ರೆಸಾರ್ಟ್‌ಗಳು ಹಾಗೂ ಸರಿಯಾದ ಉಟೋಪಾಚಾರ ಇಲ್ಲದೆ ಇರುವ ಬಗ್ಗೆ ಸುದ್ದಿಬಿಂದು ಕೂಡ ನಿರಂತರವಾಗಿ ಸುದ್ದಿ ಮಾಡುತ್ತಾ ಬಂದಿರುವುದನ್ನ ಸಹ ಸ್ಮರಿಸಬಹುದು. ಸಮುದ್ರ ಕಿನಾರೆ ಸೇರಿ ವಿವಿಧ ಕಡೆ ಅನಧಿಕೃತ ಹೋಂ ಸ್ಟೇ’ಗಳಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಆ ಭಾಗದ ಅನೇಕರು ಗ್ರಾಮ ಪಂಚಾಯತಗೆ ದೂರು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತದ ಸಾಮಾನ್ಯ ಸಭೆಯಲ್ಲಿ ಸಹ ಅನಧಿಕೃತ ಹೋಂ ಸ್ಟೇ’ಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು ವಿವರಿಸಿದ್ದಾರೆ.

ಈ ಎಲ್ಲಾ ದೂರು ಪರಿಶೀಲಿಸಿದ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದ ಬಗ್ಗೆ ಹೆಸ್ಕಾಂ’ಗೆ ಪ್ರಶ್ನಿಸಿದ್ದಾರೆ.ಅಲ್ಲದೆ ಜಾಗದ ಗಡಿ ಗುರುತಿನ ಬಗ್ಗೆ ಮಾಹಿತಿ ನೀಡುವಂತೆ ಈಶ್ವರ ಗೌಡ ಅವರು ಭೂ ಮಾಪನಾ ಇಲಾಖೆಗೆ ಪತ್ರ ಬರೆದಿದ್ದು. ಆದರು ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಈ ಹಿನ್ನಲೆಯಲ್ಲಿ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅವರನ್ನು ಭೇಟಿ ಮಾಡಿದ ಗ್ರಾ ಪಂ ಸದಸ್ಯರು `ಅನಧಿಕೃತ ಹೋಂ ಸ್ಟೇ ತೆರವು ಆಗದೇ ಇದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ’

ಅನಧಿಕೃತ ರೆಸಾರ್ಟ್‌ಗಳಿಂದಾಗಿ ರಸ್ತೆಗಳು ಇಕ್ಕಟ್ಟಾಗಿದ್ದು, ವಾಹನ ನಿಲುಗಡೆ, ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಹೊರ ರಾಜ್ಯದ ಅನೇಕರು ಇಲ್ಲಿ ನಿಯಮಬಾಹಿರವಾಗಿ ಹೊಟೇಲ್ ನಡೆಸುತ್ತಿದ್ದು, ಅವರ ಹಿನ್ನಲೆ ಬಗ್ಗೆ ಅರಿವಿಲ್ಲ' ಎಂದು ಕಳವಳವ್ಯಕ್ತಪಡಿಸಿದ್ದಾರೆ. ಸಮಸ್ಯೆ ಆಲಿಸಿದ ಕಲ್ಯಾಣಿ ಕಾಂಬಳೆಒಂದು ವಾರದೊಳಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುವೆ’ ಎಂಬ ಭರವಸೆ ನೀಡಿದರು.

ಗಮನಿಸಿ