ಸುದ್ದಿಬಿಂದು ಬ್ಯೂರೊ ವರದಿ
ಬೆಂಗಳೂರು
ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ, ರಾಜಕೀಯ ರಂಗದ ಮೇರು ವ್ಯಕ್ತಿತ್ವದ ವ್ಯಕ್ತಿ ಎಸ್​.ಎಂ ಕೃಷ್ಣ ಅವರು ಇಂದು ನಿಧನರಾಗಿದ್ದು, ಎಸ್​.ಎಂ ಕೃಷ್ಣರ ಅಂತಿಮ ದರ್ಶನ ಪಡೆದ ಡಿ ಸಿ ಎಂ ಡಿ ಕೆ ಶಿವಕುಮಾರ ಅವರು ಒಂದು ಕ್ಷಣ‌ ಕಣ್ಣೀರು ಹಾಕಿ ಭಾವುಕರಾಗಿದ್ದಾರೆ.

ಎಸ್​ಎಂ.ಕೃಷ್ಣರ ನಿಧನರಾಗಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅಧಿವೇಶನದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿದ್ದ ಡಿ ಕೆ ಶಿವಕುಮಾರ ಅವರು ತಕ್ಷಣ  ಬೆಂಗಳೂರಿಗೆ ತೆರಳಿ ಸದಾಶಿವನಗರದಲ್ಲಿರುವ ಎಸ್ ಎಂ‌ ಕೃಷ್ಣ ಅವರ ಸ್ವಗೃಹಕ್ಕೆ ಹೋಗಿ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅವರ ಪಾರ್ಥಿವ ಶರೀರಕ್ಕೆ ನಮಿಸಿದ ಡಿ.ಕೆ ಶಿವಕುಮಾರ್​ ಕೆಲ ಕ್ಷಣ ಭಾವುಕರಾದರು.

ಎಸ್.ಎಂ ಕೃಷ್ಣ ಅವರು ಡಿ ಕೆ ಶಿವಕುಮಾರ ಅವರ ರಾಜಕೀಯ ಗುರು ಸಹ ಆಗಿದ್ದು, ಅನೇಕ ಬಾರಿ ಈ ವಿಚಾರವನ್ನ ಡಿ ಕೆ ಶಿ ಅವರು ಹೇಳಿಕೊಂಡಿದ್ದರು ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಡಿ.ಕೆ ಶಿವಕುಮರ್​. ಇತ್ತೀಚೆಗೆ ಡಿ ಕೆ ಶಿವಕುಮಾರ ತಮ್ಮ‌ ಮಗಳನ್ನು ಎಸ್​ಎಂ ಕೃಷ್ಣ ಅವದ ಮೊಮ್ಮಗನೊಂದಿಗೆ ವಿವಾಹ ಮಾಡಿಸುವುದರ ಮೂಲಕ ಸಂಬಂಧಿಕರಾಗಿದ್ದರು. ಈ ಮೂಲಕ ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲಿ ಡಿ,ಕೆ ಶಿವಕುಮಾರ ಮತ್ತು ಎಸ್​ಎಂಕೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು.

ಗಮನಿಸಿ