ಸುದ್ದಿಬಿಂದು ಬ್ಯೂರೊ ವರದಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ, ರಾಜಕೀಯ ರಂಗದ ಮೇರು ವ್ಯಕ್ತಿತ್ವದ ವ್ಯಕ್ತಿ ಎಸ್.ಎಂ ಕೃಷ್ಣ ಅವರು ಇಂದು ನಿಧನರಾಗಿದ್ದು, ಎಸ್.ಎಂ ಕೃಷ್ಣರ ಅಂತಿಮ ದರ್ಶನ ಪಡೆದ ಡಿ ಸಿ ಎಂ ಡಿ ಕೆ ಶಿವಕುಮಾರ ಅವರು ಒಂದು ಕ್ಷಣ ಕಣ್ಣೀರು ಹಾಕಿ ಭಾವುಕರಾಗಿದ್ದಾರೆ.
ಎಸ್ಎಂ.ಕೃಷ್ಣರ ನಿಧನರಾಗಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅಧಿವೇಶನದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿದ್ದ ಡಿ ಕೆ ಶಿವಕುಮಾರ ಅವರು ತಕ್ಷಣ ಬೆಂಗಳೂರಿಗೆ ತೆರಳಿ ಸದಾಶಿವನಗರದಲ್ಲಿರುವ ಎಸ್ ಎಂ ಕೃಷ್ಣ ಅವರ ಸ್ವಗೃಹಕ್ಕೆ ಹೋಗಿ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅವರ ಪಾರ್ಥಿವ ಶರೀರಕ್ಕೆ ನಮಿಸಿದ ಡಿ.ಕೆ ಶಿವಕುಮಾರ್ ಕೆಲ ಕ್ಷಣ ಭಾವುಕರಾದರು.
ಎಸ್.ಎಂ ಕೃಷ್ಣ ಅವರು ಡಿ ಕೆ ಶಿವಕುಮಾರ ಅವರ ರಾಜಕೀಯ ಗುರು ಸಹ ಆಗಿದ್ದು, ಅನೇಕ ಬಾರಿ ಈ ವಿಚಾರವನ್ನ ಡಿ ಕೆ ಶಿ ಅವರು ಹೇಳಿಕೊಂಡಿದ್ದರು ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಡಿ.ಕೆ ಶಿವಕುಮರ್. ಇತ್ತೀಚೆಗೆ ಡಿ ಕೆ ಶಿವಕುಮಾರ ತಮ್ಮ ಮಗಳನ್ನು ಎಸ್ಎಂ ಕೃಷ್ಣ ಅವದ ಮೊಮ್ಮಗನೊಂದಿಗೆ ವಿವಾಹ ಮಾಡಿಸುವುದರ ಮೂಲಕ ಸಂಬಂಧಿಕರಾಗಿದ್ದರು. ಈ ಮೂಲಕ ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲಿ ಡಿ,ಕೆ ಶಿವಕುಮಾರ ಮತ್ತು ಎಸ್ಎಂಕೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು.
ಗಮನಿಸಿ