ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಬೆಂಗಳೂರಿನಲ್ಲಿ ಡಿಸೆಂಬರ್ 5 ರಿಂದ ಪ್ರಾರಂಭವಾದ 62 ನೇ ರಾಷ್ಟ್ರೀಯ ರೊಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಕ್ರೀಡಾಪಟುಗಳು ಸಿನಿಯರ್ ಡರ್ಬಿ ವಿಭಾಗದಲ್ಲಿ ಈ ವರ್ಷದ ಎರಡನೆ ರಜತ ಪದಕ ಪಡೆದುಕೊಂಡಿದ್ದಾರೆ.
ವಿಶೇಷವಾಗಿ ಯಲ್ಲಾಪುರ ತಾಲೂಕಿನಿಂದ ಪ್ರತಿನಿಧಿಸಿದ ಪಟ್ಟಣದ ವಾಯ್.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ಸತೀಶ ನಾಯ್ಕ, ಕರ್ನಾಟಕ ರಾಜ್ಯ ಸಿನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆಯುವ ಮೂಲಕ ತಾಲೂಕಿನ ಗೌರವ ಹೆಚ್ಚಿಸಿದ್ದಾರೆ. ಸೇಜಲ್ ಸತೀಶ್ ನಾಯ್ಕ ಪ.ಪಂ ಸದಸ್ಯ ಸತೀಶ್ ನಾಯ್ಕ ಪುತ್ರಿಯಾಗಿದ್ದು ಅಗಸ್ಟ ತಿಂಗಳಿನಲ್ಲಿ ತಮಿಳನಾಡಿನ ಕೊಯಮತ್ತೂರಿನಲ್ಲಿ ನಡೆದ ರಾಷ್ಟ ಮಟ್ಟದ ಇಂಡಿಯಾ ಸ್ಕೇಟ್ 2024 ಚಾಂಪಿಯನಶಪ್ ನಲ್ಲಿ ಭಾಗವಹಿಸಿ ರಜತ ಪದಕ ಬೇಟೆಯಾಡಿದ್ದಳು.ಇವಳೊಂದಿಗೆ ಶಿರಸಿಯ ಎಮ್.ಈ.ಎಸ್ ಕಾಲೇಜಿನ ಅನಘಾ ರಮೇಶ ಹೆಗಡೆ, ದಾಂಡೇಲಿಯ ಸಾನಿಕಾ ಉಮೇಶ ತೊರತ್ ತಂಡದಲ್ಲಿದ್ದು ಪದಕಕ್ಕೆ ಭಾಜನರಾಗಿದ್ದಾರೆ. ಕರ್ನಾಟಕ, ತಮಿಳನಾಡು , ಯುಪಿ, ಓರಿಸ್ಸಾ , ತಮಿಳನಾಡು , ಪಂಜಾಬ್ , ಮಹಾರಾಷ್ಟ ಇನ್ನಿತರ ರಾಜ್ಯದ ತಂಡಗಳು ಪಂದ್ಯಾವಳಿಯಲ್ಲಿ ಬಾಗವಹಿಸಿದ್ದರು.
ಈ ಮೂವರು ಕೈಗಾ ರೊಲರ್ ಸ್ಕೇಟಿಂಗ್ ಕ್ಲಬ್ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿದ್ದು ಸತತ ನಾಲ್ಕನೆ ಬಾರಿ ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದಾರೆ ಎಂದು ತರಬೇತುದಾರ ದೀಲಿಪ್ ಹಣಬರ್ ಹಾಗು ಸಹಾಯಕ ತರಬೇತುದಾರರಾದ ಮಂಜಪ್ಪಾ ನಾಯ್ಕ ತಿಳಿಸಿದ್ದಾರೆ.
ಸೇಜಲ್ ಸತೀಶ್ ನಾಯ್ಕ ಸಾಧನೆಗೆ ಶಾಸಕ ಶಿವರಾಮ ಹೆಬ್ಬಾರ್, ವಿಜಯ ಮಿರಾಶಿ , ವ್ಹಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಶಾನಭಾಗ , ಪಟ್ಟಣ ಪಂಚಾಯತ ಅಧ್ಯಕ್ಷೆ ನರ್ಮಧಾ ನಾಯ್ಕ ಉಪಾಧ್ಯಕ್ಷ ಅಮಿತ್ ಅಂಗಡಿ, ದೈಹಿಕ ಶಿಕ್ಷಕರಾದ ಗಂಗಾ ನಾಯ್ಕ, ಜಿ ಎನ್ ತಾಂಡುರಾಯನ್ ಪ್ರಶಂಶಿಸಿದ್ದಾರೆ.
ಗಮನಿಸಿ