ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಈ ಹಿಂದೆ 2013-18ರ ಅವಧಿಯಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಅವಧಿಯಲ್ಲಿ ಪ್ರಾರಂಭಿಸಿ ಹಿಂದಿನ ಬಿಜೆಪಿ ಅವಧಿಯಲ್ಲಿ ಅಪೂರ್ಣಗೊಂಡಿದ್ದ ಮಂಜುಗುಣಿ, ಕೆರವಡಿ, ಕಡಿಯೇ, ಕರ್ಕಲ್, ಖಾರ್ಗೆಜೂಗ್ ಹಾಗೂ ಹಿಣೇಬೈಲ್ ಸೇತುವೆ ಕಾಮಗಾರಿಗಾಗಿ ಶಾಸಕ ಸತೀಶ ಸೈಲ್ ಸರಕಾರದಿಂದ 19 ಕೋಟಿಗೂ ಅಧಿಕ ಹೆಚ್ಚುವರಿ ಅನುದಾನ ತಂದಿದ್ದಾರೆ.
ಈ ಹಿಂದೆ ಸತೀಶ ಸೈಲ್ ಅವರು ಶಾಸಕರಾಗಿದ್ದ ವೇಳೆ ಸಿಎಂ ಹಾಗೂ ಹಣಕಾಸು ಖಾತೆ ಹೊಂದಿದ್ದ ಸಿದ್ದರಾಮಯ್ಯ ರವರಿಂದ ಒಪ್ಪಿಗೆ ಪಡೆದು ಕಾಮಗಾರಿ ಮಾಡಲಾಗಿತ್ತು.ಆದರೆ ಕೆ ಆರ್ ಡಿ ಸಿ ಎಲ್ ರಿಂದ ಮಂಜೂರು ಮಾಡಿಸಿ ಡಿ. ಆರ್. ನಾಯ್ಕ ಕಂನ್ಸರ್ಟಕ್ಷನ್ ರವರಿಗೆ ಟೆಂಡರ್ ಆಗಿ ಕೆಲಸ ಆರಂಭಿಸಲಾಗಿದ್ದ ಉಳಗಾ-ಕೆರವಡಿ ಮತ್ತು ಮಂಜುಗುಣಿ-ಗಂಗಾವಳಿ ಸೇತುವೆಗಳು 2018 ರಿಂದ 2023 ರವರೆಗೆ ಕಾಮಗಾರಿ ಮುಂದುವರೆಸಲಾಗದೆ. ಕಾಮಗಾರಿ ಸ್ಥಗಿತವಾಗಿತ್ತು. , 2023ರಲ್ಲಿ ಶಾಸಕರಾದ ಸತೀಶ್ ಸೈಲ್ ರವರು, ಈ ಸೇತುವೆಗಳಿಗೆ ಹೆಚ್ಚುವರಿ ಅನುದಾನ ಬೇಕಾಗಿರುವುದನ್ನು ಮನಗಂಡು ಸತತವಾಗಿ ಪ್ರಯತ್ನಿಸಿ, ಸಿ ಎಂ ಅವರಿಂದ ಹೆಚ್ಚುವರಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 29ರಂದು ರೂ.19-70 ಕೋಟಿಗಳನ್ನು ಮುಖ್ಯ ಅಭಿಯಂತರರು KRDCL ಇವರು 2021-22 ರ ಎಸ್, ಆರ್ ದರದಲ್ಲಿ ಮಂಜೂರು ಮಾಡಲಾಗಿದೆ. ಈ ಕಾಮಗಾರಿಗಳಲ್ಲಿ ಮಂಜುಗುಣಿ-ಗಂಗಾವಳಿ ಸೇತುವೆಗೆ ಫೆಬ್ರವರಿ 2025ರವರೆಗೆ, ಕೆರವಡಿ-ಉಳಗಾ ಸೇತುವೆಗೆ ಮಾರ್ಚ್ 2025 ರವರೆಗೆ ಪೂರ್ಣಗೊಳಿಸಲು ಅಂತಿಮ ಗಡುವು ನೀಡಲಾಗಿದೆ.ಆದರಿಂದ ಮಂಜುಗಣಿ ಗಂಗಾವಳಿಯಲ್ಲಿ ತಾತ್ಕಾಲಿಕವಾಗಿ ದ್ವಿಚಕ್ರ ಹಾಗೂ ಇತರೆ ವಾಹನ ಸವಾರರು ಸಹಕರಿಸಬೇಕಿದೆ. ಹೆಚ್ಚುವರಿ ಅನುದಾನವನ್ನು ನೀಡಿ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಜನರ ಪರವಾಗಿ ಶಾಸಕರು ಅಭಿನಂದಿಸಿದ್ದಾರೆ.
ಸುಮಾರು ನಾಲ್ಕು ವರ್ಷಗಳಗಳಿಂದ ಸ್ಥಗಿತಗೊಂಡ ಸೇತುವೆ ಗಳನ್ನು ಪೂರ್ಣಗೊಳಿಸುವುದಾಗಿ ಸತೀಶ್ ಸೈಲ್ ರವರು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಘೋಷಿಸಿದ್ದರು,ಅದರಂತೆ ಹಿಡಿದ ಕೆಲಸವನ್ನು ಬೆಂಬಿಡದೆ ಪ್ರಯತ್ನಿಸಿ ಹೆಚ್ಚುವರಿ ಅನುದಾನ ರೂ.19.70 ಕೋಟಿಗಳನ್ನು ತಂದು ಎರಡೂ ಸೇತುವೆಯನ್ನು ಪೂರ್ಣಗೊಳಿಸುವಲ್ಲಿ ನುಡಿದಂತೆ ನಡೆದ ಶಾಸಕರಾಗಿದ್ದಾರೆ. ಇನ್ನೂ ಅಪೂರ್ಣ ವಾದ ಉಂಬಳಿಜೂಗ ಸೇತುವೆ ಪೂರ್ಣಗೊಳಿಸವುದಲ್ಲದೇ ಇನ್ನು ಅನೇಕ ಸೇತುವೆ ಗಳನ್ನು ತರಲು ಪ್ರಯತ್ನಿಸುವುದಾಗಿ ತಿಳಿಸಿರುತ್ತಾರೆ.
2008ರಿಂದ 2013ರ ಅವಧಿಯಲ್ಲಿ ಅಪೂರ್ಣ ವಾದ ಕಡವಾಡ-ಸುಂಕೇರಿ ಸೇತುವೆ ಯನ್ನು 2013ರಲ್ಲಿ ಶಾಸಕರಾದ ಸತೀಶ್ ಸೈಲ್ ರವರು ಹೆಚ್ಚುವರಿ ಅನುದಾನ ತಂದು ಪೂರ್ಣಗೊಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಕಾರವಾರ ಅಂಕೋಲಾ ಕ್ಷೇತ್ರದ ಜನತೆ ನುಡಿದಂತೆ ನಡೆದ ಶಾಸಕರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಗಮನಿಸಿ