ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ :ಪ್ರವಾಸಿಗರ ತಾಣವಾಗಿರುವ ಗೋಕರ್ಣದಲ್ಲಿ ಕಳೆದ ಎರಡು ವರ್ಷದಿಂದ ತಲೆಎತ್ತಿ ನಿಂತಿರುವ ಸುಸಜ್ಜಿತವಾದ ಗೋಧಾವರಿ ಹೊಟೇಲ್ನ ಕಲ್ಮಶ ನೀರನ್ನ ಸಾಣಿಕಟ್ಟಾ ಉಪ್ಪಿನ ಘಟಕಕ್ಕೆ ಬಿಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದು, ಇದಕ್ಕೆ ಸಂಬಂಧಿಸಿ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರ ಸಂಘ ಇದೀಗ ಗೋದಾವರಿ ಹೊಟೇಲ್ನಿಂದ ತಮ್ಮ ಉಪ್ಪಿನ ಘಟಕ್ಕೆ ಯಾವುದೇ ರೀತಿಯಾದ ಕಲ್ಮಶ ನೀರನ್ನ ಬಿಟ್ಟಿಲ್ಲ ಎಂದು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರ ಸಂಘ ಸ್ಪಷ್ಟನೆ ನೀಡಿದ್ದರಿಂದ ಸಾರ್ವಜನಿಕರಲ್ಲಿ ಉಂಟಾಗಿದ್ದ ಆತಂಕ ದೂರವಾದಂತಾಗಿದೆ.ಸ್ಥಳೀಯರ ಹೇಳಿಕೆ ಪ್ರಕಾರ ಈ ಬಗ್ಗೆ ಸುದ್ದಿ ಬಿಂದು ಸಹ ಸುದ್ದಿ ಬಿತ್ತರಿಸಿತ್ತು. ಈ ಬಗ್ಗೆ ಓದುಗರು ಗಮನಿಸಬೇಕಾಗಿ ವಿನಂತಿ.ಈ ಬಗ್ಗೆ ಸುದ್ದಿಬಿಂದು ವಿಷಾಧಿಸುತ್ತದೆ.
ಕಿಡಿಗೇಡಿಗಳ ಕೃತ್ಯ
ನಮ್ಮ ಹೊಟೇಲ್ನ ಬೆಳವಣಿಗೆ ಸಹಿಸಲಾಗದ ಕೆಲ ಕಿಡಿಗೇಡಿಗಳು ಹೊಟೇಲ್ನ ಹೆಸರು ಕೆಡಿಸಲು ಈ ರೀತಿಯಾದ ಕುತಂತ್ರ ಮಾಡುತ್ತಿದ್ದಾರೆ. ಆದರೆ ನಮ್ಮ ಹೊಟೇಲ್ ಕಾನೂನು ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಕಾನುನೂ ಪ್ರಕಾರ ಪ್ರವಾಸೋದ್ಯಮ ಹಾಗೂ ಹೊಟೇಲ್ ಉದ್ಯಮಕ್ಕೆ ಎಲ್ಲಾ ರೀತಿಯ ಪರವಾನಿಗೆ ಪಡೆದು ಪಾಲನೆ ಮಾಡತ್ತಿರುವ ಶ್ರೀಕ್ಷೇತ್ರ ಗೋಕರ್ಣದಲ್ಲಿರುವ ಏಕೈಕ ತ್ರೀಸ್ಟಾರ್ ಹೊಟೇಲ್ ನಮ್ಮದಾಗಿದೆ ಎಂದು ಹೇಳಿಕೊಳ್ಳಲು ನನ್ನಗೆ ಹಾಗೂ ನಮ್ಮ ಸಿಬ್ಬಂದಿಗಳಿಗೆ ಹೆಮ್ಮೆಯಾಗಿದೆ.
ಜರಲ್ ಮೆನಜರ್, ಹೊಟೇಲ್ ಗೋದಾವರಿ ಗೋಕರ್ಣ
ಗಮನಿಸಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ




