ಸುದ್ದಿಬಿಂದು ಬ್ಯೂರೋ ವರದಿ
sirsi:ಶಿರಸಿ :ತಾಲೂಕಿನ ಪ್ರತ್ಯೇಲ ಶಾಲೆಗಳಲ್ಲಿ ಸೇವೆಯಲ್ಲಿದ್ದ ಇಬ್ಬರೂ ಶಿಕ್ಷಕರು ಇಂದು ಒಂದೇ ದಿನ ನಿಧನರಾಗಿರುವ ಘಟನೆ ನಡೆದಿದೆ.
ಪ್ರತಿಷ್ಠಿತ ಚಂದನ ಶಾಲೆಯ ಶಿಕ್ಷಕಿಯಾಗಿದ್ದ ಮಾದೇವಿ ಕಿರಣ ನಾಯ್ಕ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಪಲಕಾರಿಯಾಗದೆ ನಿಧನರಾಗಿದ್ದಾರೆ. ಇವರು ಮೂಲತಃ ಕುಮಟಾ ನಿವಾಸಿಯಾಗಿದ್ದು ಶಿರಸಿ ಚಿಪಗಿ ನಾರಾಯಣಗುರು ನಗರದಲ್ಲಿ ನೆಲೆಸಿದ್ದ ಮಾದೇವಿ ಇವರು ಚಂದನ ಶಾಲೆಯಲ್ಲಿ ಆರಂಭದಿಂದಲೂ ಕನ್ನಡ ಶಿಕ್ಷಕಿಯಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.ಮೃತರು ಪತಿ ಈರ್ವರು ಪುತ್ರಿಯರು ಹಾಗು ತಾವು ಅಪಾರವಾಗಿ ಪ್ರೀತಿಸುತ್ತಿದ್ದ ವಿದ್ಯಾರ್ಥಿ ಹಾಗು ಶಿಕ್ಷಕ ವೃಂದವನ್ನು ಅಗಲಿದ್ದಾರೆ.
ಸಂತಾಪ : ಶಿಕ್ಷಕಿ ಮಾದೇವಿ ನಿಧನಕ್ಕೆ ಮಲೆನಾಡು ಚಂದನ ಶಾಲೆಯ ಕಾರ್ಯದರ್ಶಿ ಎಲ್ ಎಮ್ ಹೆಗಡೆ ತೀವೃ ಸಂತಾಪ ವ್ಯಕ್ತಪಡಿಸಿ ಅವರು ಶಾಲೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
ಹೃದಯಾಘಾತ ಪ್ರಾಂಶುಪಾಲ ಯಜ್ಷೇಶ್ವರ ನಾಯ್ಕ ನಿಧನ
ಶಿರಸಿ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಯಜ್ಷೇಶ್ವರ ಆರ್ ನಾಯ್ಕ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ..ಮೃತರು ಪತ್ನಿ ಈರ್ವರು ಪುತ್ರಿಯರು ಮತ್ತು ತಮ್ಮನ್ನು ಪ್ರೀತಿಸುತ್ತಿದ್ದ ವಿದ್ಯಾರ್ಥಿ ಸಮೋಹ ಮತ್ತು ಶಿಕ್ಷಕವೃಂದದವರನ್ನು ಬಂದು ಬಳಗದವರನ್ನು ಬಿಟ್ಟು ಅಗಲಿದ್ದಾರೆ. ಮೂಲತಹ ಸಿದ್ದಾಪುರ ತಾಲೂಕಿನ. ಬೇಡ್ಕಣಿಯವರಾಗಿದ್ದ ಅವರು ಹಾವೇರಿಯಲ್ಲಿ ಮುಖ್ಯೋದ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕ ಶಿರಸಿ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಉಪ ಪ್ರಾಂಶುಪಾಲರಾಗಿ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.ಮೃತ ದೇಹವನ್ನು ಮಾರಿಕಾಂಬಾ ಶಾಲೆಗೆ ತಂದು ಬಳಿಕ ಅವರ ಹೂಟ್ಟೂರಿಗೆ ಸಾಗಿಸಲಾಯಿತು.
ಶಾಸಕ ಭೀಮಣ್ಣ ನಾಯ್ಕ.ಸಂತಾಪ: ಯಜ್ಷೇಶ್ವರ ನಾಯ್ಕ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಭೀಮಣ್ಣ ನಾಯ್ಕರು ಟಿ ಎಸ್ ಎಸ್ ಆಸ್ಪತ್ರಗೆ ತೆರಳಿ ಅಂತಿಮ ದರ್ಶನ ಪಡೆದು ಯಜ್ಷೇಶ್ವರ ನಾಯ್ಕ ಮಾರಿಕಾಂಬಾ ಶಾಲೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅದ್ಯಕ್ಷ ಜಗದೀಶ ಗೌಡ ಹಾಜರಿದ್ದರು.
ಗಮನಿಸಿ
- ಹೈಟೆಕ್ ತಂತ್ರಕ್ಕೆ ಸಿಕ್ಕಿಬಿದ್ದ ಜೂಜುಕೋರರು; ಡ್ರೋಣ್ ಮೂಲಕ ಪತ್ತೆಯಾದ ಇಸ್ಪೀಟ್ ಅಡ್ಡೆ
- “ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ನಾಯ್ಕ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಗಿಡ ವಿತರಿಸಿದ ಪ್ರಶಾಂತ ನಾಯ್ಕ”
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮರು ಅರ್ಜಿ ಕಡ್ಡಾಯ : ರಾಜ್ಯ ಸರ್ಕಾರದಿಂದ ಮರುಪರಿಶೀಲನೆಗೆ ಸಿದ್ಧತೆ
- “ಕಾಲೇಜು ಶುಲ್ಕ ಕಟ್ಟಲು ಉಳಿಸಿದ್ದ ₹10 ಸಾವಿರ ವಾಪಸ್ ಸಿಗಲಿಲ್ಲ; ಮನನೊಂದು 19ರ ವಿದ್ಯಾರ್ಥಿನಿ ಆತ್ಮಹತ್ಯೆ

