Karwar:ಕಾರವಾರ: ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಸೀಬರ್ಡ್ ನೌಕಾನೆಲೆ ಹಾಗೂ ಕೊಂಕಣರೈಲ್ವೆ ಯೋಜನೆಯ ನಿರಾಶ್ರಿತರ ಅಹವಾಲು ಸ್ವೀಕಾರ ಸಭೆ ನಡೆಸಿದರು.

ಕಾರವಾರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ನೂರಾರು ಜನ ನಿರಾಶ್ರಿತರು ತಮ್ಮ ತಮ್ಮ ಸಮಸ್ಯೆಗಳನ್ನು ಸಂಸದರ ಗಮನೆಕ್ಕೆ ತಂದರು.ಸೀಬರ್ಡ್ ನೌಕಾ ನೆಲೆ ಯೋಜನೆಗಾಗಿ ಸಾವೀರಾರು ಜನ ತಮ್ಮ ಮೂಲ ನೆಲೆ ಕಳೆದುಕೊಂಡಿದ್ದು, ಆ ನಿರಾಶ್ರಿತರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವಲ್ಲಿ ರಕ್ಷಣಾಇಲಾಖೆ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸೀಬರ್ಡ್ ನಿರಾಶ್ರಿತರು ತಮ್ಮ ಅಳಲನ್ನು ಸಂಸದರ ಬಳಿ ತೋಡಿಕೊಂಡರು.

ಸೀಬರ್ಡ್ ನೌಕಾನೆಲೆ ಹಾಗೂ ಕೊಂಕಣರೈಲ್ವೆ ಯೋಜನೆ ಪ್ರಾರಂಭವಾಗಿ ಮೂರು ದಶಕಗಳು ಕಳೆದರೂ ಇನ್ನೂ ಮೂಲ ನಿವಾಸಿಗಳಿಗೆ ಪ್ರಾರಂಭದಲ್ಲಿ ನೀಡಿದ ಆಶ್ವಾಸನೆ ಈಡೇರಿಸಿಲ್ಲ. ಆಶ್ವಾಸನೆಯ ಭರವಸೆಯಲ್ಲೇ ಅನೇಕರು ಮರಣಹೊಂದಿದ್ದಾರೆ, ಮನೆಗೊಂದು ನೌಕರಿ ನೀಡುವುದಾಗಿ ಹೇಳಿ ಈಗ ಉತ್ತರಭಾರತದ ಕಾರ್ಮಿಕರಿಗೆ ಮಾತ್ರ ಉದ್ಯೋಗ ನೀಡುತಿದ್ದಾರೆ , ಯೋಜನೆಗಾಗಿ ಜಾಗ ನೀಡಿದ ಅನೇಕ ಕುಟುಂಬಕ್ಕೆ ಇನ್ನೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಎಲ್ಲಾ ನಿರಾಶ್ರಿತರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಸಂಸದರು , ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಚರ್ಚಿಸಿ ಎರಡೂ ಯೋಜನೆಗಳ ನಿರಾಶ್ರಿತರಿಗೆ ಸೂಕ್ತ ಪರಿಹಾರ ಒದಗಿಸುವ ಹಾಗೂ ನೌಕಾ ನೆಲೆಯಲ್ಲಿ ಉದ್ಯೋಗಕ್ಕೆ ಸೇರಬಯಸುವ ಸ್ಥಳಿಯ ಯುವಕರಿಗೆ ಸ್ಥಳೀಯಮಟ್ಟದಲ್ಲೇ ತಾಂತ್ರಿಕ ಶಿಕ್ಷಣ ಒದಗಿಸುವ ಭರವಸಿ ನೀಡಿದರು.

ಗಮನಿಸಿ