ಸುದ್ದಿಬಿಂದು ಬ್ಯೂರೋ
ಕುಮಟಾ : ಪಟ್ಟಣದ ಮೀನುಮಾರುಕಟ್ಟೆ ಬಳಿ ಇರುವ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ವಾರ್ಡ್ ಮೇಲೆ‌ ಮಹಿಳೆ ಓರ್ವರು ತನ್ನ ಮೇಲೆ ಮಾಡಿರುವ ಲೈಂಗಿಕ ಕಿರುಕುಳ ‌ಆರೋಪ ವೈಯಕ್ತಿಕ ಕಾರಣದಿಂದ‌ ಕೂಡಿದೆ ಎಂದು ವಾರ್ಡನ್ ಸ್ಪಷ್ಟನೆ ನೀಡಿದ್ದಾರೆ.

ಅದೆ ವಸತಿ ಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಸ್ವಚ್ಚತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ ಓರ್ವಳು ಅಲ್ಲಿನ ವಾರ್ಡನ್ ಆಗಿರುವ ಶಂಕರ್ ಎಸ್ ಪೊಳ್ ಎಂಬುವವರು ಮೂರು ವರ್ಷದಿಂದ‌ ನಿರಂತರವಾಗಿ ಲೈಂಗಿಕ ಕಿರುಕಿಳು ನೀಡುತ್ತಿರುವ ಬಗ್ಗೆ ನೊಂದ ಮಹಿಳೆ ವಾರ್ಡನ್ ವಿರುದ್ದ ಮಾಡಿರುವ ಆರೋಪದ ಬಗ್ಗೆ ಸುದ್ದಿ ಪ್ರಕಟಿಸಲಾಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿದ ಪ್ರತಿಕ್ರಿಯಿಸಿರುವ ವಾರ್ಡನ್ ಶಂಕರ್ ಪೊಳೆ ಅವರು ಆ ಮಹಿಳೆ‌‌ ವಸತಿ ಶಾಲೆಯಲ್ಲಿ ಮಾಡಿರುವ ಕೆಲವೊಂದು ತಪ್ಪುಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಿದ್ದೆ. ಆ ಕಾರಣಕ್ಕಾಗಿಯೇ ಈಗ ತನ್ನ ಮೇಲೆ ಸುಳ್ಳಾಗಿ ಲೈಂಗಿಕ ಕಿರುಕುಳ ಆರೋಪ‌ ಮಾಡಿದ್ದಾರೆ. ಇದರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ‌‌.

ಗಮನಿಸಿ