suddibindu.in
Kumta : ಕುಮಟಾ:ನಾಡ ಬಂದೂಕಿನಿಂದ ಹೆಬ್ಬಾವು ಹೊಡೆಯಲು ಹೋಗಿದ್ದ ವ್ಯಕ್ತಿಗೆ ಹೆಬ್ಬಾವಿಗೆ ಹೊಡೆದ ಗುಂಡು ಆತನಿಗೆ ರಿವರ್ಸ್ ತಗುಲಿ ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕತಗಾಲ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.
ಘಟನೆಯಲ್ಲಿ ಪ್ರಥಮ ಸುಬ್ಬ ನಾಯ್ಕ,(28) ಎಂಬಾತನೆ ಮೃತ ಪಟ್ಟಿದ್ದಾನೆ. ಈತ ಮನೆಯ ಸಮೀಪದಲ್ಲೆ ಕೋಳಿ ಫಾರ್ಮ್ ಮಾಡಿಕೊಂಡಿದ್ದ ಎನ್ನಲಾಗಿದೆ. ರಾತ್ರಿ ವೇಳೆ ಆ ಕೋಳಿ ಫಾರ್ಮ್ಗೆ ಹೆಬ್ಬಾವು ಬಂದಿತ್ತು ಎನ್ನಲಾಗಿದ್ದು, ಹೀಗಾಗಿ ಅದನ್ನ ಹೊಡೆಯಲು ಆತ ಹೋಗಿದ್ದ ಎನ್ನಲಾಗಿದೆ.ಈ ವೇಳೆ ಗುಂಡು ಹಾರಿಸಿದ್ದು, ಆತ ಹಾರಿಸಿದ ಗುಂಡೆ ಉಲ್ಟಾ ಆತನಿಗೆ ಬಡಿದು ಮೃತಪಟ್ಟಿರುವುದಾಗಿ ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೆ ಸ್ಪಷ್ಟ ಮಾಹಿತಿ ಸಿಗಬೇಕಿದೆ.
ಇನ್ನೂ ಈ ಘಟನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಕುಮಟಾ ಪೊಲೀಸರು ಮೂವರನ್ನ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.ಆತ ನಿಜವಾಗಲೂ ಹಾವಿಗೆ ಹೊಡೆದ ಗುಂಡು ತಗಲಿ ಮೃತಪಟ್ಟಿದ್ದಾನೋ. ಅಥವಾ ಅದೇ ವೇಳೆ ರಾತ್ರಿ ಸಮಯದಲ್ಲಿ ಕಾಡಿನಲ್ಲಿ ಪ್ರಾಣಿ ಭೇಟಿಗೆ ಹೋಗಿದ್ದರು ಹಾರಿಸಿರುವ ಗುಂಡು ತಗುಲಿದೇಯೋ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಸದ್ಯ ಮೂವರನ್ನ ಪೊಲೀಸರು ಕರೆದೊಯ್ದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇನೆ ಇದ್ದರೂ ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ..
ಇದನ್ನೂ ಓದಿ