suddibindu.in
ಕುಮಟಾ:ರಾಜ್ಯಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿ ಕಾರ್ಯಕ್ರಮ ದಾವಣಗೆರೆಯ ಗುರುಭವನದಲ್ಲಿ ನಡೆಯಿತು. ರಾಜ್ಯಾದ್ಯಂತ ಜಿಲ್ಲೆಗಳ ಶಿಕ್ಷಕರ ಸಾಧನೆಯನ್ನು ಪರಿಶೀಲಿಸಿ ಶಿಕ್ಷಣ ಸೌರಭ ಪ್ರಶಸ್ತಿಯನ್ನು ನೀಡಲಾಯಿತು.

ಉತ್ತರ ಕನ್ನಡದಲ್ಲಿ ಕುಮಟಾ ತಾಲೂಕಿನ ಮೊರಬಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಲ್ಪನಾ ಬಿ ನಾಯಕ. ಕನ್ನಡ ನುಡಿ ವೈಭವ2024ರ ಪ್ರಶಸ್ತಿಗೆ ಭಾಜನಾರದ ಇವರು ತಮ್ಮ 30 ವರ್ಷಗಳ ಸೇವಾ ಅವಧಿಯಲ್ಲಿ ಅಕ್ಷರವನ್ನು ಉಸಿರಾಗಿಸಿ ಶಿಕ್ಷಣವನ್ನೇ ಬೆಳಕಾಗಿಸಿಕೊಂಡು ತಮ್ಮ ವ್ಯಾಪ್ತಿಯ ಗ್ರಾಮೀಣ ಬಡ ಹಿಂದುಳಿದ ವಿದ್ಯಾರ್ಥಿಗಳ ಮನದಲ್ಲಿ ಸ್ವಾಭಿಮಾನದ ಆಶಾಕಿರಣ ಹುಟ್ಟಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ವಿದ್ಯಾ ದಾನ ಮಾಡಿರುತ್ತಾರೆ.

ಮಾತ್ರ ಸಂಸ್ಥೆ ಶಿಕ್ಷಣ ಇಲಾಖೆಯೊಂದಿಗೆ ಸಕಾರಾತ್ಮಕ ನಿ ಲುವಿನೊಂದಿಗೆ ಶಾಲಾ ಶೈಕ್ಷಣಿಕ ಸಾಂಸ್ಕೃತಿಕ ಸೃಜನಶೀಲತೆ ಮೂಲಕ ಅವಿರತವಾಗಿ ದುಡಿದು ಮಕ್ಕಳಲ್ಲಿ ವೈಚಾರಿಕತೆ ವೈಜ್ಞಾನಿಕತೆ ಭಾಷಾ ಪ್ರೇಮ, ಹಾಗೂ ರಾಷ್ಟ್ರ ಪ್ರೇಮ ಸ್ವಾಭಿಮಾನ ಬೆಳೆಸುವಲ್ಲಿ ಯಶಸ್ಸು ಕಂಡವರು.ಇವರ ಕಾರ್ಯದಕ್ಷತೆ ಸರಳತೆ ಹಾಗೂ ನಾವಿನ್ಯಯುತ ಕಲಿಕಾ ಚಟುವಟಿಕೆಗಳನ್ನು ಗಮನಿಸಿಕನ್ನಡ ನುಡಿ ವೈಭವ 2024 ರ ರಾಜ್ಯಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ.

ಇದನ್ನೂ ಓದಿ