suddibindu.in
Karwar ಕಾರವಾರ : ಉತ್ತರಕನ್ನಡ ಜಿಲ್ಲೆಯ ಬಹುತೇಕ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಇಂದು ಕುಮಟಾ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯುವುದಿತ್ತು. ಆದರೆ ಕಾಂಗ್ರೆಸ್ ಸದಸ್ಯೆ ವಿನಯಾ ಜಾರ್ಜ್ ಮೀಸಲಾತಿ ವಿರುದ್ಧ ಕೋರ್ಟ್ ನಿಂದ ತಡೆಯಾಜ್ಞೆ ತಂದ ಕಾರಣ ಆಯ್ಕೆ ಪ್ರಕ್ರಿಯೆ ಸಾಧ್ಯವಾಗಿಲ್ಲ.
ಇದನ್ನೂ ಓದಿ
- ಮಾ.19ಕ್ಕೆ ಬರ್ಗಿಯಲ್ಲಿ ಸುಲಗಾಯಿ ಪಂದ್ಯಾವಳಿ
- ಏರ್ ಗನ್ ಗುಂಡು ಹಾರಿ ಯುವಕ ಸ್ಥಳದಲ್ಲೇ ಸಾವು
- ಮಹಿಳೆಯರು ಶಿಕ್ಷಣ ಮತ್ತು ಕೌಶಲ್ಯದಿಂದ ಸ್ವಾವಲಂಬಿಗಳಾಗಬೇಕು : ಮಾರ್ಗರೇಟ್ ಆಳ್ವಾ
ಬಿಜೆಪಿ ಪಕ್ಷವು ತನ್ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅಂತಿಮಗೊಳಿಸಿದ್ದು, ಸುಮತಿ ಭಟ್ ಅಧ್ಯಕ್ಷರಾಗಿ, ಮಹೇಶ ನಾಯ್ಕ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು ಎಂದು ವಿಶ್ವಸನೀಯ ಮೂಲಗಳು ತಿಳಿಸಿತ್ತು. ಆದರೆ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಬಿಜೆಪಿಗರ ಕನಸು ಭಗ್ನಗೊಂಡಂತಾಗಿದೆ.




