suddibindu.in
Karwar: ಕಾರವಾರ: ಜಿಲ್ಲೆಯಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ಜನ-ಜೀವನ ಕೂಡ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶದಲ್ಲನ ಜನರನ್ನ ಎತ್ತರ ಪ್ರದೇಶಕ್ಕ ಸ್ಥಳಾಂತರ ಮಾಡಲಾಗಿದೆ.ಎತ್ತರದಲ್ಲಿದ್ದ ಹಾವುಗಳು ಈಗ ತಗ್ಗು ಪ್ರದೇಶವನ್ನ ಸೇರಿಕೊಳ್ಳತ್ತಿದೆ. ಕಾಡಿನಲ್ಲಿದ್ದ ಭಾರೀ ಗಾತ್ರದ ಹೆಬ್ಬಾವು ಮಳೆ ನೀರಿಗೆ ತೇಲಿ ಬಂದು ಮನೆ ಸೇರಿಕೊಂಡಿರುವ ಘಟನೆ ಕಾರವಾರ ನಗರದ ಸೋನಾರವಾಡದಲ್ಲಿ ನಡೆದಿದೆ.

ಕಾರವಾರದಲ್ಲಿ ಮನೆಯ ಬಳಿ ಮಳೆ ನೀರಿನಲ್ಲಿ ಬಂದ ಬೃಹತ್ ಗಾತ್ರದ ಹೆಬ್ಬಾವು ನಗರದ ಸೋನಾರವಾಡದ ಅರಣ್ಯ ಸಮೀಪದಲ್ಲಿದ್ದ ಮನೆಯೊಂದನ್ನ ಸೇರಿಕೊಂಡಿದೆ. ಸುಮಾರು 12 ಅಡಿ ಉದ್ದದ ಹೆಬ್ಬಾವು ಇದಾಗಿದ್ದು,ಬೃಹತ್ ಗಾತ್ರದ ಹಾವನ್ನ ನೋಡಿ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.ಮಳೆ ನೀರಿನಲ್ಲಿ ತೇಲಿ ಬಂದ ಈ ಹಾವು ಮನೆಯೊಳಗೆ ಸೇರಿಕೊಂಡಿದೆ.
ಇದನ್ನೂ ಓದಿ
- ಅನಂತಕುಮಾರ ಹೆಗಡೆ ಬೆಂಬಲಿಗರಿಂದ ಹೆದ್ದಾರಿಯಲ್ಲೆ ಹಲ್ಲೆ
- ಪೊಲೀಸರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು : ಎಸ್ಪಿ ಎಂ ನಾರಾಯಣ
- ಸಾತೊಡ್ಡಿ ಜಲಪಾತಕ್ಕೆ ಪ್ರವೇಶ ನಿಷೇಧ
ತಕ್ಷಣ ಮನೆ ಮಾಲೀಕರು ಉರಗ ಪ್ರೇಮಿ ಗೋಪಾಲ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಬಂದ ಗೋಪಾಲ ಅವರು ಸುಮಾರು ಒಂದು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನ ರಕ್ಷಣೆ ಮಾಡಿದ್ದಾರೆ.