suddibindu.in
Karwar:ಕಾರವಾರ: ಕರಾವಳಿ ಜಿಲ್ಲೆಯಲ್ಲಿರುವ ಯುವಕರು ಕೊಲ್ಲಲ್ಲು ಇರುವವರಲ್ಲ, ಕೊಲೆಯಾಗುವುದಕ್ಕೂ ಇರುವವರಲ್ಲ, ಜೈಲಿಗೆ ಹೋಗಬೇಕಾದವರು ಅಲ್ಲ, ಹಿಂದುಳಿದವರು ಜೈಲಿಗೆ ಹೋಗಿದ್ದು ಸಾಕು,ಈ ಸಲ ಸಂಸತ್ ಗೆ ಹೋಗಬೇಕು.ಹಿಗಂತಾಹ ಕರಾವಳಿಯ ಲೋಕಸಭಾ ಕ್ಷೇತ್ರದ ಹಿಂದುಳಿದ ಯುವ ಸಮೂಹ ಮಾತ್ನಾಡಿಕೊಳ್ಳಲು ಆರಂಭಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಜಾಗೃತೆಯ ಹೇಳಿಕೆಗಳು ವ್ಯಾಪಕವಾಗಿ ಕಂಡು ಬರತ್ತಾ ಇದೆ. ಇಂತಹ ಬರಹಗಳು, ಹೇಳಿಕೆಗಳು ಕರಾವಳಿ ಜಿಲ್ಲೆಯ ಹಿಂದುಳಿದ ಸಮುದಾಯದಲ್ಲಿ ಜಾಗೃತಿ ಮಾಡುತ್ತಿರುವುದನ್ನ ಪ್ರತಿಬಿಂಬಿಸ್ತಾ ಇದೆ. ಕರಾವಳಿಯಲ್ಲಿ ಮೂವತ್ತಮೂರು ವರ್ಷಗಳ ಬಳಿಕ ಹಿಂದುಳಿದ ವರ್ಗದ ವ್ಯಕ್ತಿಗಳಿಗೆ ಸಂಸತ್‌ ಪ್ರವೇಶ ಮಾಡಲು ಅವಕಾಶ ಒದಗಿ ಬಂದಿದೆ ಅಂತಾ ಹಿಂದುಳಿದ ವರ್ಗದಲ್ಲಿ ಚರ್ಚೆ ನಡೆಯುತ್ತಿದೆ. ಹಿಂದುಳಿದ ವರ್ಗದವರು ರಾಜಕೀಯ ಗುಲಾಮರಲ್ಲ, ಧರ್ಮರಕ್ಷಣೆ ಕೇವಲ ಹಿಂದುಳಿದ ಯುವಕರ ಕೆಲಸವಲ್ಲ, ಧರ್ಮರಕ್ಷಣೆಯನ್ನ ಇನ್ನು ಮುಂದೆ ಮೇಲ್ವರ್ಗದವರು ಮಾಡಲಿ, ಹಿಂದುಳಿದ ಯುವಕರು ಕತ್ತಿ ಹಿಡಿದಿದ್ದು ಸಾಕು.ಇನ್ನ ಮುಂದೆ ಹಿಂದುಳಿದವರು ಪೆನ್ನು ಹಿಡಿಯಲಿ, ಕರಾವಳಿಯಲ್ಲಿ ಹಿಂದುಳಿದ ಸಮುದಾಯದ ಸೇವೆ ಕರಾವಳಿ ಜಿಲ್ಲೆಯ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತೆವೆಂದು ಹಿಂದುಳಿದ ಸಮುದಾಯ ಹೇಳುತ್ತಿದೆ.

ಇದನ್ನೂ ಓದಿ

ಕರಾವಳಿ ಜಿಲ್ಲೆಯ ಹಿಂದುಳಿದ ಸಮುದಾಯದ ಜನರಲ್ಲಿ ಪ್ರಜ್ಞೆ ಬಂದಿರುವಂತಿದೆ. ಈ ಜಿಲ್ಲೆಗಳಲ್ಲಿ ರಾಜಕೀಯ ಸಮೀಕರಣವೆ ಬದಲಾಗುವ ಸಾಧ್ಯತೆ ಕಂಡು ಬರತ್ತಾ ಇದೆ.ಹಿಂದೂತ್ವದಲ್ಲಿ ಮೈ ಮರೆತಿದ್ದವರಿಗೆ ಈಗ ಪ್ರಜ್ಞೆ ಬಂದಿದೆ. ಕರಾವಳಿಯಲ್ಲಿ ಫಲಿಂತಾಶ ಏನಾಗಬಹುದು ಎಂಬುವ ಕೂತುಹಲ ಈಗಲೆ ಮನೆ ಮಾಡುವಂತೆ ಮಾಡಿದೆ. ಕರಾವಳಿಯಲ್ಲಿ ಹಿಂದುಳಿದ ಮತದಾರರು ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯದಿಂದ ಸ್ಪರ್ಧೆ ಮಾಡಿದವರೆ ಸೋಲುತ್ತಾ ಬಂದಿದ್ದಾರೆ.ಆದರೆ ಇದುವರೆಗೆ ನಡೆದಿರುವುದೆ ಒಂದು ಲೆಕ್ಕ,‌ಈ ಬಾರಿ ನಡೆಯುವುದೇ ಬೇರೆ ಲೆಕ್ಕ ಎನ್ನಲಾಗುತ್ತಿದೆ. ಅಸಾಧ್ಯ ಎಂಬಲ್ಲಿ ಸಾಧ್ಯ ಎಂಬ ಒಂದು ರಾಜಕೀಯ ಪಲ್ಲಟದ ವಾತಾವರಣ ಕರಾವಳಿ ಜಿಲ್ಲೆಗಳಲ್ಲಿ ತೆಳ್ಳಗೆ ಕಂಡು ಬರತ್ತಾ ಇದೆ.

ಅದಕ್ಕೆ ಪ್ರಮುಖ ಕಾರಣ ಹಿಂದುಳಿದ ಸಮುದಾಯದಲ್ಲಿ ಉಂಟಾಗಿರುವ ರಾಜಕೀಯ ಜಾಗೃತಿ, ಮೂವತ್ತಮೂರು ವರ್ಷಗಳಿಂದ ರಾಜಕೀಯವಾಗಿ ಹಿಂದುಳಿದವರಿಗೆ ಆಗತ್ತಾ ಇರುವ ಅನ್ಯಾಯವನ್ನ ಈ ಸಲ ತೊಡೆದು ಹಾಕಬೇಕುನ್ನುವುದು ಹಿಂದುಳಿದವರಲ್ಲಿ ಕಂಡು ಬರತ್ತಾ ಇದೆ. ಕರಾವಳಿಯ ಹಿಂದೂತ್ವದ ಸುಳಿಯಲ್ಲಿ ಬಹುಸಂಖ್ಯಾತ ಹಿಂದುಳಿದ ಸಮುದಾಯಕ್ಕೆ ರಾಜಕೀಯವಾಗಿ ಮೋಸ ಆಗಿರೋದನ್ನ ಹಿಂದುಳಿದ ಸಮುದಾಯದ ಯುವಕರು ಮನಗಂಡಿದ್ದಾರೆ.

ಕರಾವಳಿ ಜಿಲ್ಲೆಯ ಬಹುಸಂಖ್ಯಾತ ಮತದಾರರು ಹಿಂದುಳಿದ ವರ್ಗಕ್ಕೆ ಸೇರಿದವರು. ಹಿಂದೂತ್ವದ ಬಲೆಯಲ್ಲಿ ಬಿದ್ದು ಟ್ರ್ಯಾಪ್‌ ಆಗಿರುವ ಹಿಂದುಳಿದ ಯುವಕರು ಹಿಂದುಳಿದ ವರ್ಗದಿಂದ ಸ್ಪರ್ಧೆ ಮಾಡಿದ ಅನೇಕರನ್ನ ಮನೆಗೆ ಕಳೆಸಿಬಿಟ್ಟಿದ್ದಾರೆ.ಕೋಮುದ್ವೇಷವನ್ನ ಯುವಕರ ತಲೆಗೆ ತುಂಬುವ ಕೆಲಸವನ್ನ ಪಟ್ಟಭದ್ರರು ಮಾಡಿದ್ದರು.ಅನ್ಯ ಧರ್ಮದ ವಿರುದ್ದ ಹಿಂದುಳಿದ ಯುವಕರನ್ನ ಎತ್ತಿಕಟ್ಟಲಾಯತ್ತು. ದುಷ್ಯಕೃತ್ಯಗಳನ್ನ ನಡೆಸಲು ಅವರನ್ನ ಬಳಸಿಕೊಳ್ಳಲಾಯತ್ತು.ಕಳೆದ ಮೂವತ್ತು ವರ್ಷಗಳಲ್ಲಿ ಕರಾವಳಿಯಲ್ಲಿ ಕೋಮು ಸಂಘರ್ಷದ ರಕ್ತ-ಸಿಕ್ತ ಇತಿಹಾಸವನ್ನೊಮ್ಮೆ ಅವಲೋಕಿಸಿ ನೋಡಿ,

ಅಲ್ಲಿ ಹಿಂದುಳಿದ ವರ್ಗದವರೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣತ್ತಾರೆ.ಆರೋಪಿಗಳಲ್ಲಿ ಹೆಚ್ಚು ಹಿಂದುಳಿದವರು ಅನ್ಯಾಯಕ್ಕೆ ಒಳಗಾದವರಲ್ಲೂ ಹಿಂದುಳಿದ ಯುವಕರು ಹೆಚ್ಚು.ಕೋಮು ಸಂಘರ್ಷದಲ್ಲಿ ಜೈಲು ಸೇರಿದವರು ಕೂಡ ಹಿಂದುಳಿದ ಯುವಕರು,ಕರಾವಳಿಯ ಧರ್ಮ ರಾಜಕಾರಣದಲ್ಲಿ ಹಿಂದುಳಿದ ಯುವಕರನ್ನ ಹೇಗೆ ಬಳಸಿಕೊಳ್ಳಲಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.ಕರಾವಳಿಯ ಧರ್ಮ ಸಂಘರ್ಷದಲ್ಲಿ ಮೇಲ್ವರ್ಗದ ಯಾರೊಬ್ಬನು ಅಲ್ಲಿ ಕಂಡು ಬಂದಿಲ್ಲ. ಶ್ರೀಮಂತರ ಮಕ್ಕಳು ಇಲ್ಲ. ರಾಜಕಾರಣಿಗಳ ಮಕ್ಕಳು ಇಲ್ಲ.

ಆದರೆ ಅದೆ ಪಟ್ಟಭದ್ರ ಶಕ್ತಿಗಳು ಧರ್ಮರಕ್ಷಣೆಗಾಗಿ ಹಿಂದುಳಿದ ಯುವಕರ ಕೈಗೆ ಕತ್ತಿಕೊಟ್ಟು ಕಳುಹಿಸಿದ್ದಾರೆ.ಇಲ್ಲಿ ಹೋರಾಡಿದ್ದು ಹಿಂದುಳಿದವರು,ಅದೇ ಹೋರಾಟದಿಂದ ಸಿಕ್ಕಿದ ಅಧಿಕಾರವನ್ನ ಅನುಭವಿಸಿದ್ದು ಮಾತ್ರ ಬೇರೆಯವರು. ಹಿಂದೂತ್ವದಲ್ಲಿ ಮೈಮರೆತ ಹಿಂದುಳಿದ ಯುವಕರಿಗೆ ನಾವೆಂತಹ ತಪ್ಪು ಮಾಡತ್ತಿದ್ದೆವೆ ಎಂಬ ಅರಿವೆ ಇರಲಿಲ್ಲ. ಆದರೆ ಈಗಿಗ ಆ ಅರಿವು ಆ ಜಾಗೃತಿ ಆ ಪ್ರಜ್ಞೆ ಯುವಕರಲ್ಲಿ ಬಂದಿದೆ ಎನಿಸುತ್ತೆ.

ಹಿಂದುಳಿದವರನ್ನ.ಹಿಂದುಳಿದವರೆ ಗೆಲಿಸಲಿಲ್ಲ.ಇಲ್ಲಿ ಹಿಂದುಳಿದವರು ಕಾಲಾಳುಗಳಾದ್ರೂ ಎಂಬ ಸತ್ಯವನ್ನ ಹಿಂದುಳಿದ ವರ್ಗದ ಹೊಸ ತಲೆಮಾರಿನ ಯುವಕರು ಮನಗಂಡಿರುವಂತೆ ಕಾಣುತ್ತಿದೆ. ಪಕ್ಷ ಮುಖ್ಯವಲ್ಲ ಹಿಂದುಳಿದ ಅಭ್ಯರ್ಥಿ ಮುಖ್ಯ ಎಂದ ತೀರ್ಮಾನಕ್ಕೆ ಹಿಂದುಳಿದವರು ಬರತ್ತಾ ಇದ್ದಾರೆ. ಹಿಂದುಳಿದವರಿಗೆ ತಮ್ಮ ತಪ್ಪನ್ನ ಸರಿಪಡಿಸಲು ಈ ಸಲ ಅವಕಾಶ ಬಂದಿದೆ ಅಂತಾ ಹಿಂದುಳಿದ‌ ಮುಖಂಡರು ಮನದಟ್ಟು ಮಾಡಿಕೊಳ್ಳತ್ತಿದ್ದಾರೆ.ಹಿಂದುಳಿದವರ ಈ ಪಶ್ಚಾತಾಪ ಮತಗಳಾಗಿ ಕನ್ವಟ್‌ ಆದ್ರೆ ಕರಾವಳಿ ಜಿಲ್ಲೆಗಳ ಮೂರು ದಶಕದ ಚಿತ್ರಣ ಸಂಪೂರ್ಣವಾಗಿ ಬದಲಾವಣೆ ಆಗುವ ಸಾಧ್ಯತೆ ಇದೆ.