suddibindu.in
ಶಿರಸಿ: ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಇಂದುವಚಾಲನೆ ದೊರೆತಿದೆ.ಇಂದು ಬೆಳಿಗ್ಗೆ ನಗರದ ಮಾರಿಕಾಂಬ ದೇವಸ್ಥಾನದಿಂದ ದೇವಿಯ ಮೂರ್ತಿಯನ್ನ ರಥದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ಗದ್ದುಗೆಗೆ ತರಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರ ಜಯ ಘೋಷದೊಂದಿಗೆ ತಾಯಿ ಮಾರಿಕಾಂಬಾ ದೇವಿ ಗದ್ದೆಗೆಯಲ್ಲಿ ಆಶಿನಳಾಗಿದ್ದಾಳೆ
.

ರಾಜ್ಯದಲ್ಲಿಯೇ ಅತಿದೊಡ್ಡ ಜಾತ್ರಾ ಮಹೋತ್ಸವ ಎನ್ನುವ ಖ್ಯಾತಿ ಪಡೆದಿರುವ ಶಿರಸಿ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ನಾಡಿನ ಶಕ್ತಿ ಪೀಠದಲ್ಲಿ ಒಂದಾದ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ರಾಜ್ಯದಿಂದಲ್ಲದೇ ದೇಶದ ವಿವಿಧ ರಾಜ್ಯಗಳಿಂದ ಸಹ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮಾರಿಕಾಂಬ ಜಾತ್ರಾ ಮಹೋತ್ಸವ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯಲಿದ್ದು ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ನಿನ್ನೆಯಿಂದ ಪ್ರಾರಂಭವಾಗಿದ್ದು ಇಂದು ಬೆಳಿಗ್ಗೆ ದೇವಿಯ ಮೂರ್ತಿಯನ್ನ ಮಾರಿಕಾಂಬ ದೇವಸ್ಥಾನದಿಂದ ರಥದ ಮೂಲಕ ಮೆರವಣಿಗೆಯಲ್ಲಿ ನಗರದ ಬಸ್ ನಿಲ್ದಾಣದ ಬಳಿ ಇರುವ ಗದ್ದುಗೆಗೆ ತರಲಾಯಿತು. ರಥವನ್ನ ದೇವಸ್ಥಾನದಿಂದ ತರುವಾಗ ವಿವಿಧ ಕಲಾತಂಡಗಳು, ವಾದ್ಯಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಇನ್ನಷ್ಟು ರಂಗು ಹೆಚ್ಚಿಸಿದವು.

ಇದನ್ನೂ ಓದಿ

ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು. ಅಲ್ಲದೇ ದೇವಿಗೆ ಹರಕೆಗಾಗಿ ತಂದಂತಹ ಕೋಳಿಗಳನ್ನ ಬಾಳೆಹಣ್ಣನ್ನ ದೇವಿಗೆ ಅರ್ಪಿಸಿದರು. ಮಾರಿಕಾಂಬ ಜಾತ್ರಾ ಮಹೋತ್ಸವ ಒಟ್ಟು 9 ದಿನಗಳ ಕಾಲ ನಡೆಯಲಿದೆ. ಗದ್ದುಗೆಗೆ ಕುಳಿತ ಮಾರಿಕಾಂಬೆಗೆ ಇಂದಿನಿಂದ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುವುದು. ಅಲ್ಲದೇ ರಾಜ್ಯದ ಮೂಲೆ ಮೂಲೆಯಿಂದ ಬಂದಂತಹ ಜೊತೆಗೆ ದೇಶದ ವಿವಿಧ ಭಾಗಗಳಿಂದ ಬಂದಂತಹ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ಜಾತ್ರೆಯನ್ನ ಅದ್ದೂರಿಯಾಗಿ ನೆರವೇರಿಸಲು ಸಕಲ ಸಿದ್ದತೆಯನ್ನ ಮಾಡಿಕೊಂಡಿದೆ. ದೇವಸ್ಥಾನದಲ್ಲಿ ಬರುವ ಎಲ್ಲಾ ಭಕ್ತರಿಗೂ ಉಚಿತವಾಗಿ ಅನ್ನಸಂತರ್ಪನೆ ನೀಡಲಾಗುತ್ತಿದೆ.

ಇದರ ಜೊತೆಗೆ ಯಾವುದೇ ಅನಾಹುತ ಆಗದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತನ್ನ ಸಹ ಮಾಡಲಾಗಿದೆ. ಶಿರಸಿ ಜಾತ್ರೆಯನ್ನ ನೋಡುವುದೇ ವಿಶೇಷವಾಗಿದ್ದು ಇಂದಿನಿಂದ ಜಾತ್ರೆ ಪ್ರಾರಂಭವಾಗಿದ್ದು ದೇವಿಯನ್ನ ಗದ್ದುಗೆಯಲ್ಲಿ ದರ್ಶನ ಪಡೆದಿರುವುದು ಸಂತಸ ಆಗಿದೆ ಅಂತಾ ಭಕ್ತರು ಖುಷಿ ಪಟ್ಟರು. ಜಾತ್ರೆಯ ಮತ್ತೊಂದು ವಿಶೇಷವೆಂದರೆ ಇಲ್ಲಿ ಪ್ರಾಣಿ ಬಲಿಯ ಬದಲಾಗಿ ಬೂದುಕುಂಬಳ ಕಾಯಿಯನ್ನ ಬಲಿಯಾಗಿ ನೀಡುವ ಮೂಲಕ ಪ್ರಾಣಿ ಬಲಿಯನ್ನ ವಿರೋದಿಸಲಾಗುತ್ತದೆ.ಎಂದಿನಂತೆ ಈ ಬಾರಿ ಸಹ ಸಂಪ್ರದಾಯದಂತೆ ಗದ್ದುಗೆ ಮುಂದೆ ಬೂದು ಕುಂಬಳ ಕಾಯಿಯನ್ನ ಬಲಿ ನೀಡಲಾಯಿತು. ಇನ್ನು ಈ ಬಾರಿ ಜಾತ್ರೆಯಲ್ಲಿ ಯಾವುದೇ ಅನಾಹುತ ಆಗದಂತೆ ಎಲ್ಲಡೆ ಸಿಸಿಟಿವಿಗಳನ್ನ ಸಹ ಅಳವಡಿಸಿದ್ದು ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ.

ಇನ್ನೂ ಲಕ್ಷಾಂತರ ಭಕ್ತ ಸಾಗರದಲ್ಲಿ ಹದಿನೈದಕ್ಕೂ ಹೆಚ್ಚು ಮಕ್ಕಳು ಪಾಲಕರಿಂದ ಮಿಸ್ ಆಗಿದ್ದರು, ಆದ್ರೆ ಪೊಲೀಸರ ಸಹಕಾರದಿಂದ ಎಲ್ಲ ಮಕ್ಕಳು ಪಾಲಕರ ಕೈ ಸೇರಿದ್ರು. ಶಿರಸಿಯಲ್ಲಿ ಈಗ ಜಾತ್ರೆಯ ಸಂಭ್ರಮ ಮುಗಿಲು ಮುಟ್ಟಿದ್ದು ಭಕ್ತರು ಶಿರಸಿಯತ್ತ ತಂಡೋಪಾದಿಯಲ್ಲಿ ಆಗಮಿಸುವ ಮೂಲಕ ದೇವಿ ದರ್ಶನ ಪಡೆಯಲು ಮುಗಿ ಬೀಳುತ್ತಿದ್ದಾರೆ. ಇನ್ನು 7 ದಿನಗಳ ಕಾಲ ಜಾತ್ರೆ ನಡೆಯಲಿದೆ.

ಡೊಳ್ಳು ಬಾರಿಸಿದ ಶಾಸಕ ಭೀಮಣ್ಣ ನಾಯ್ಕ್


ಶಿರಸಿ ವಿಧಾನಸಭ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಭೀಮಣ್ಣ ನಾಯ್ಕ ಅವರು,‌ಇಂದು ಶಿರಸಿಯಲ್ಲಿ ನಡೆದ ಮಾರಿಕಾಂಬಾ ದೇವಿ ಜಾತ್ರಾ ರಥೋತ್ಸವ ದಲ್ಲಿ ಡೊಳ್ಳು ಕುಣಿತ ತಂಡದೊಂದಿಗೆ ಆಗಮಿಸಿ ಡೊಳ್ಳು ಬಾರಿಸಿ ಕುಣಿಯುವ ಮೂಲಕ ಗಮನ ಸೆಳೆದಿದ್ದಾರೆ.ಶಾಸಕ ಎನ್ನುವ ಅಹಃ ಇಲ್ಲದೆ ಸಾಮಾನ್ಯರಂತೆ ಲಕ್ಷಾಂತರ ಭಕ್ತರ ಮದ್ಯೆ ಡೊಳ್ಳು ಬಾರಿಸಿ ಕುಣಿದು ಸಂಭ್ರಮಿಸಿದರು