ಸುದ್ದಿಬಿಂದು ಬ್ಯೂರೋ
ಕುಮಟಾ :ಬೈಕ್ ಕಳ್ಳತನ ಮಾಡಿ ತಲೆಮರೆಕೊಳ್ಳುತ್ತಿದ್ದ ಕುಖ್ಯಾತ ಬೈಕ್ ಕಳ್ಳನ ಬಂಧಿಸಿದ ಕುಮಟಾ ಪೊಲೀಸರು ಆತನಿಂದ ಮೂರು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿ ಶಿರಸಿ ನಗರದ ಕಸ್ತೂರಬಾ ನಗರದ ಖಾಲಿದ್‌ ಶರೀಪ್ ಸಾಬ್ ಕನವಳ್ಳಿ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತ ಆರೋಪಿ ವಿರುದ್ಧ ಕುಮಟಾ,ಭಟ್ಕಳ,ಶಿರಸಿ ಸೇರಿದಂತೆ ಹಲವು ಕಡೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.ಈತ ಬಸ್ ನಿಲ್ದಾಣ, ಹೊಟೇಲ್ ಎದುರುಗಡೆ ನಿಲ್ಲಿಸಿಟ್ಟ ಬೈಕಿನ ಕೀಲಿಯನ್ನ ಕ್ಷಣಾರ್ಧದಲ್ಲಿ ಒಡೆದು ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ.

ಬಂಧಿತ ಆರೋಪಿಯಿಂದ 1ಲಕ್ಷ ಮೌಲ್ಯದ ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ. ಭಟ್ಕಳ ಡಿವೈಎಸ್ಪಿ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಅವರ ನೇತೃತ್ವದಲ್ಲಿ ಕುಮಟಾ ಪಿಎಸ್ಐ ನವೀನ್ ನಾಯ್ಕ,ಸುನೀಲ್ ಬಂಡಿವಡ್ಡರ್ ಹಾಗೂ ಪದ್ಮಾ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನ ಬಂಧಿಸಲಾಗಿದೆ.