ಸುದ್ದಿಬಿಂದು ಬ್ಯೂರೋ
ಕಾರವಾರ
: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಬಹುತೇಕ ಜಲಾಶಯಗಳು(Kadra Reservoir ) ಭರ್ತಿಯಾಗಿದ್ದು,ಕಾರವಾರ ತಾಲೂಕಿನ ಕದ್ರಾ ಜಲಾಶಯದಿಂದ ಮತ್ತಷ್ಟು ಹೆಚ್ಚಿನ ಪ್ರಮಾಣದ ನೀರನ್ನ ಹೊರಬಿಡಲಾಗಿದೆ.

ಕದ್ರಾ ಜಲಾಶಯದಿಂದ ನಿನ್ನೆ ಎರಡು ಗೇಟಗಳ ಮೂಲಕ‌ 5ಸಾವಿರ ಕ್ಯೂಸೆಕ್ ನೀರನ್ನ ಹೊರಬಿಡಲಾಗಿತ್ತು. ಮತ್ತೆ ಇಂದು ಒಟ್ಟು ಆರು ಗೇಟ ಮೂಲಕ 30 ಸಾವಿರ‌ ಕ್ಯೂಸೆಕ್ಸ್ (30 thousand cusecs)ನೀರು ಹೊರಬಿಡಲಾಗುತ್ತಿದೆ.
ಜಲಾನಯನ‌ ಪ್ರದೇಶದಲ್ಲಿಯೇ ಅತೀ ಹೆಚ್ಚು ಮಳೆ ಸುರಿಯುತ್ತಿದೆ.ಇದರಿಂದಾಗಿ ಜಲಾಶಯದ ನೀರಿನ ಒಳ ಹರಿವಿನ ಪ್ರಮಾಣ ಸಹ ಜಾಸ್ತಿಯಾಗಿದೆ. ಕದ್ರಾ ಜಲಾಶಯವು 34.50 ಮೀಟರ್ ಗರಿಷ್ಠ ಸಾರ್ಮಥ್ಯವನ್ನ ಹೊಂದಿದೆ. ಜಲಾಶಯಕ್ಕೆ 31ಮೀಟರ್ ಗರಿಷ್ಠ ಮಟ್ಟ ಕಾಯ್ದು ಕೊಳ್ಳುವಂತೆ ಜಿಲ್ಲಾಡಳಿತ ತಿಳಿಸಿದೆ.

ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನ ಹೊರ‌ಬಿಡಲಾಗುತ್ತಿರುವುದರಿಂದಾಗಿ ಜಲಾಶಯ ಕೆಳಗಿನ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಜಲಾಶಯ ವ್ಯಾಪ್ತಿಯ ನಿವಾಸಿಗಳಿಗೆ ಸೂಚನೆ