ಹೊನ್ನಾವರ : ಕಾಂಗ್ರೆಸ್ ನವರಿಗೆ ಭಜರಂಗಿ ಅಂದ್ರೆ ಯಾಕೆ ಕೋಪ? ಹನುಮಾನ್ ಜಪ ಮಾಡಿದ್ರೆ ಭೂತ ಪಿಶಾಚಿಗಳ ಕಾಟ ನಿವಾರಣೆ ಆಗುತ್ತವೆ.ಪರೋಕ್ಷವಾಗಿ ಕಾಂಗ್ರೆಸ್ ನ್ನು ಭೂತಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೋಲಿಸಿದರು.
ಹೊನ್ನಾರವರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕರಾವಳಿಯಲ್ಲಿ ಬಿಜೆಪಿ ಅಭ್ಯರ್ಥಿ ಗಳನ್ನ ಗೆಲ್ಲಿಸಿ ಎಂದು ಮನವಿ ಮಾಡಿದ ಯೋಗಿ.ಅಯೋಧ್ಯಾ ರಾಮನ ಊರಿನಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ.ಭಾರತದ ಅಭಿವೃದ್ಧಿ ಸಹಿಸದವರು ಮೋದಿಯವರ ವಿರೋಧ ಮಾಡುತಿದ್ದಾರೆ. ಭಜರಂಗದಳ ನಿಷೇಧ ಮಾಡಿದರೇ ಪಿಎಫ್ಐ ,ಐಎಸ್ ಐ ಆಹ್ವಾನ ಮಾಡಿದಂತೆ..ನಾವು ಪಿಎಫ್ ಐ , ಐಎಸ್ಐ ಸೊಂಟ ಮುರಿಯುತ್ತೇವೆ ಎಂದರು.
ಅಂಜನಾದ್ರಿಯಲ್ಲಿ ಶ್ರೀ ಹನುಮಾನ್ ಮಂದಿರವನ್ನು ಯಡಿಯೂರಪ್ಪ,ಬೊಮ್ಮಾಯಿಯವರ ನೇತ್ರತ್ವದಲ್ಲಿ ಹನುಮಾನ್ ಮಂದಿರ ನಿರ್ಮಾಣ ಮಾಡುತಿದ್ದಾರೆ.ಕಾಂಗ್ರೆಸ್ ಹನುಮಾನ್ ನನ್ನ ಏಕೆ ವಿರೋಧ ಮಾಡುತ್ತಿದೆ.ಉತ್ತರ ಪ್ರದೇಶದ ರಾಮಮಂದಿರದ ಉದ್ಘಾಟನೆಯಲ್ಲಿ ಕರ್ನಾಟಕದವರೂ ಭಾಗಿಯಾಗಬೇಕು.ರಾಮಮಂದಿರದ ಉದ್ಘಾಟನೆಗೆ ನಿಮ್ಮನ್ನು ಆಹ್ವಾನಿಸಲು ಬಂದಿದ್ದೇವೆ ಎನ್ನುವ ಮೂಲಕ ಕೇವಲ ಹತ್ತೆ ನಿಮಿಷ ಭಾಷಣ ಮಾಡಿ ಹರಾತುರಿಯಲ್ಲಿ ಯೋಗಿ ಅವದು ಹೊರಟಿಹೋದರು.