ಸುದ್ದಿಬಿಂದು ಬ್ಯೂರೋ
ಕಾರವಾರ : ತನ್ನ ವೈಯಕ್ತಿಕ ಕಾರಣಗಳಿಂದ ರಾಜಕೀಯದಿಂದ ದೂರ ಉಳಿದುಕೊಂಡಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಈ ಬಾರಿ ಕಾಂಗ್ರೆಸ್ ಸೇರಲಿದ್ದಾರೆ. ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಇದೀಗ ಅವರು ಈ ಪಕ್ಷೇತರವಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕಾರಣಕ್ಕೆ ಆಪ್ತರನ್ನ ಭೇಟಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿರುವ ಅಸ್ನೋಟಿಕರ್ ಈ.ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರೆ ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ. ಇದುವರೆಗೆ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಬಗ್ಗೆ ಸಹ ಕ್ಷೇತ್ರದಲ್ಲಿ ಚರ್ಚೆಗಳು ನಡೆಯುತ್ತಿತ್ತು. ಆದರೆ ಬದಲಾದ ರಾಜಕಾರಣದ ಪರಿಸ್ಥಿತಿಯಲ್ಲಿ ಪಕ್ಷೇರವಾಗಿ ಸ್ಪರ್ಧೆ ಮಾಡಲು ಆನಂದ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇದೆ ವಿಚಾರಕ್ಕೆ ಸಂಬಂಧಿಸಿ ಆನಂದ ಈಗಾಗಲೆ ಅನೇಕರಿಗೆ ಪೋನ್ ಕರೆ ಮಾಡಿ ಪಕ್ಷೇತರ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದು, ಬೆಂಬಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಈಗ ಅವರ ಆಪ್ತವಲಯದಿಂದಲ್ಲೆ ಕೇಳಿಬರುತ್ತಿದೆ.
ಆನಂದ ಅಸ್ನೋಟಿಕರ್ ಜೊತೆ ಸದಾ ಒಟ್ಟಿಗೆ ಇರುವವರು ಸಹ ಕೆಲವರಿಗೆ ವೈಯಕ್ತಿಕವಾಗಿ ಭೇಟಿಯಾಗಿ ಹಾಗೂ ಪೋನ್ ಮಾಡಿ ಸಾಹೇಬ್ರು ಪಕ್ಷೇತರವಾಗಿ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದಾರೆ. ನೀವೆಲ್ಲರೂ ಈ ಹಿಂದೆ ನೀಡಿರುವ ಬೆಂಬಲದಂತೆ ಈ ಬಾರಿ ಕೂಡ ನೀಡಬೇಕು ಎಂದು ಹೇಳಿದ್ದು, ಅದರಕ್ಕೆ ಆಪ್ತರು ಸಹ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಆನಂದ ಅಸ್ನೋಟಿಕರ್ ಪಕ್ಷೇತರವಾಗಿ ಸ್ಪೃರ್ಧಿಸಿಲು ಜಿಲ್ಲೆಯ ಬಿಜೆಪಿಯ ಹಿರಿಯ ರಾಜಕಾರಣಿ ಒಬ್ಬರು ಆರ್ಶಿವಾದ ನೀಡಿದ್ದಾರೆನ್ನಲಾಗುತ್ತಿದ್ದು, ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರೆ ಬಿಜೆಪಿಯಲ್ಲಿ ಈಗಾಗಲೆ ಅಸಮಧಾನಕ್ಕೆ ಒಳಗಾಗಿರುವ ಎಲ್ಲರೂ ನಿಮ್ಮಗೆ ಬೆಂಬಲ ನೀಡುವಂತೆ ನಾನು ನೋಡಿಕೊಳ್ಳುತ್ತೇನೆ. ನೇರವಾಗಿ ಸ್ಪರ್ಧೆಗೆ ಇಳಿಯುವಂತೆ ಆ ಪ್ರಮುಖ ನಾಯಕರೊಬ್ಬರು ಆನಂದ ಅಸ್ನೋಟಿಕರ್ ಅವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಹಿರಿಯ ನಾಯಕನ ಬೆಂಬಲ ಸಿಕ್ಕಿರುವುದರಿಂದ ಆನಂದ ಪಕ್ಷೇತರ ಸ್ಪರ್ಧೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ಕ್ಷೇತ್ರದ ತಮ್ನ ಹಳೆಯ ಕಾರ್ಯಕರ್ತರು ಹಾಗೂ ಮುಂಡರನ್ನ ಭೇಟಿ ಮಾಡಿ ತಾವೇಲ್ಲಾ ಮೊದಲಿನಿಂದ ತಮ್ಮ ತಂದೆಯವರ ಜೊತೆಗೆಯಲ್ಲಿ ಇದ್ದವರು.ಅಸ್ಮೋಟಿಕರ ಕುಟುಂಬ ಯಾವಾಗಲ್ಲು ನಿಮ್ಮನ್ನ ಮರೆಯೊದಿಲ್ಲ ಎಂಬುದು ಗೋತ್ತು ಈ ಬಾರಿ ಎಲ್ಲರೂ ಸೇರಿ ಮತ್ತೊಮ್ಮೆ ತನ್ನಗೆ ಬೆಂಬಲಿಸಬೇಕು ಎಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಅದು ಏನೆ ಇರಲಿ ಒಂದು ವೇಳೆ ಆನಂದ ಅಸ್ನೋಟಿಕರ್ ಅವರು ಈ ಬಾರಿ ಏನಾದರೂ ಪಕ್ಷೇತರವಾಗಿ ಸ್ಪೃಧೆ ಮಾಡಿದ್ದರೆ. ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ತ್ರೀಕೋನ ಸ್ಪರ್ಧೆ ಏರ್ಪಡುವುದರಲ್ಲಿ ಯಾವುದೆ ಅನುಮಾನಗಳು ಇಲ್ಲ…