ಕುಮಟಾ : ಚುನಾವಣೆ ಬಂತೆಂದರೆ ಎಂ ಎಲ್ ಎ ಕನಸು ಕಾಣುವವರು ಮತದಾರ ಪ್ರಭು ಮುಂದೆ ನಾನು ನಿಮ್ಮ ಸೇವಕ.. ನಿಮ್ಮ ಸೇವೆಗೆಂದೆ ನಾನು ಬಂದವನು…ನನಗೆ ಬೇಕಿದ್ರೇ ದಿನದ 24ಗಂಟೆಯಲ್ಲಿ ಎಷ್ಟೋತ್ತಿಗೆ ಬೇಕಾದ್ರೂ ಪೋನ್ ಮಾಡಬಹುದು ಎಂದು ಮತದಾರರನ್ನು ಒಲೈಸಿ ಮತಗಿಟ್ಟಿಸಿಕೊಳ್ತಾರೆ…
ಅದೇ ಚುನಾವಣೆಯಲ್ಲಿ ಆಯ್ಕೆ ಆಗಿ ಬಂದ ಮೇಲೆ ಇವರ ಮಾತಿನ ಒರಸೆ ಬದಲಾಗುತ್ತೆ ಅನ್ನೋದಕ್ಕೆ ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಸಾಕ್ಷಿಯಾಗ್ತಾರೆ.ಶಾಸಕರಾಗಿ ಆಯ್ಕೆ ಆದ ಮೇಲೆ ದಿನಕರ ಕಾರ್ಯಕ್ರಮವೊಂದರಲ್ಲಿ ಎಂ ಎಲ್ ಎಗಳು ಚುನಾವಣಾ ಪೂರ್ವದಲ್ಲಿ ರಾತ್ರಿ 12ಗಂಟೆಗಾದ್ರೂ ತಮಗೆ ಕಾಲ್ ಮಾಡಿ ಹೇಳಿರುತ್ತೇವೆ..
ಹಾಗಂತ ನನಗೆ ಈಗ 12 ಗಂಟೆ ನಂತ್ರ ಕಾಲ್ ಮಾಡಬೇಡಿ ಎಂದು ಹೇಳಿರುವ ಏಕ್ಸ್ ಕ್ಲೂಸಿವ್ ವಿಡಿಯೋ ಲಭ್ಯವಾಗಿದೆ. ಎಂ ಎಲ್ ಎ ದಿನಕರ ಶೆಟ್ಟಿ ಅವರು ಹೇಳಿರುವ ವಿಡಿಯೋ ಇಲ್ಲಿದೆ ನೋಡಿ.