ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ವಾಹನದ ಕೆಟ್ಟುನಿಂತ ಕಾರಣದಿಂದ ಅರಣ್ಯದಲ್ಲಿ ಸಿಲುಕಿದ್ದ 20ಕ್ಕೂ ಹೆಚ್ಚು ಪ್ರವಾಸಿಗರನ್ನು 112 ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಿಸಿರುವ ಘಟನೆ
ಬೆಂಗಳೂರು ಮೂಲದ ಪ್ರವಾಸಿಗರ ಒಂದು ತಂಡ ಯಾಣ ಪ್ರಯಾಣಕ್ಕಾಗಿ ಬಂದಿದ್ದು. 16 ಯುವಕರು, 8 ಯುವತಿಯರು ಮತ್ತು ಮಾರ್ಗದರ್ಶಕರಾದ ಒಟ್ಟು 25 ಜನರು ಮಿನಿ ಬಸ್ನಲ್ಲಿ ಆಗಮಿಸಿದ್ದರು. ಸಂಜೆ ಬೆಂಗಳೂರು ಮರಳುವ ಸಂದರ್ಭದಲ್ಲಿ ವಾಹನ ಕೆಟ್ಟುಹೋದ ಕಾರಣ. ಯಾಣ ನಿಲ್ದಾಣದ ಬಳಿ ನೆಟ್ವರ್ಕ್ ಸಿಗದೆ, ರಾತ್ರಿ ಆಗುತ್ತಿದ್ದಂತೆ ಪ್ರವಾಸಿಗರು ಯಾರ ಸಹಾಯವಿಲ್ಲದೆ ತೊಂದರೆ ಅನುಭವಿಸಬೇಕಾಗಿ ಬಂತು
ಈ ಸಮಯದಲ್ಲಿ, ಪ್ರಯಾಣಿಕರೊಬ್ಬರು 112 ತುರ್ತು ಸಂಖ್ಯೆಗೊಂದು ಧ್ವನಿ ಸಂದೇಶ ಕಳುಹಿಸಿ ಸಹಾಯ ಕೇಳಿದರು. ತಕ್ಷಣ ಗೋಕರ್ಣ 112 ಸಿಬ್ಬಂದಿ, ಸ್ಥಳದ ಮಾಹಿತಿ ಪಡೆಯಲು ಪ್ರಯತ್ನಿಸಿದರು, ಆದರೆ ನೆಟ್ವರ್ಕ್ ಇಲ್ಲದ ಕಾರಣ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಆ ಬಳಿಕ, ಯಾಣ ಘಟ್ಟದ ಕಡೆ ಪ್ರಯಾಣಿಸಿ ಹುಡುಕಾಟ ನಡೆಸಿ, ರಾತ್ರಿ 9:45ರ ಸುಮಾರಿಗೆ ಪ್ರವಾಸಿಗರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಮಯದಲ್ಲಿ, ಪ್ರವಾಸಿಗರ ವಾಹನ ಹಾನಿಗೊಂಡಿದ್ದರಿಂದ, ಜೆಸಿಬಿಯ ಸಹಾಯದಿಂದ ಅಚಾವೆ ಉಪಕೇಂದ್ರದ ಸಿಬ್ಬಂದಿ ಪ್ರವಾಸಿಗರ ಬಸ್ಸನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು. ನಂತರ, 112 ಸಿಬ್ಬಂದಿ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ತೆರಳಲು ಸಹಾಯ ಮಾಡಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ನೆರವು ನೀಡಿ ಅವರಿಗೆ ಸುರಕ್ಷಿತ ಪ್ರಯಾಣ ಕಲ್ಪಿಸಿದ 112 ಸಿಬ್ಬಂದಿಯ ಸೇವೆಯನ್ನು ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಮತ್ತು ಬೆಂಗಳೂರಿಗೆ ಹಿಂತಿರುಗುವ ಮೊದಲು ಧನ್ಯವಾದಗಳನ್ನು ಅರ್ಪಿಸಿದ್ದಾರೆ..
ಇದನ್ನೂ ಓದಿ