ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : (private bus accident )ಖಾಸಗಿ ಬಸ್ ಹೆದ್ದಾರಿ ಪಕ್ಕದ ಧರೆಗೆ
ಗುದ್ದಿಕೊಂಡ ಪರಿಣಾಮ ಬಸ್ನಲ್ಲಿದ್ದ 9ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಗೇರುಸೊಪ್ಪ ಸಮೀಪದಲ್ಲಿ ನಡೆದಿದೆ.
ಈ ಬಸ್ಸು ಚಿಕ್ಕಮಂಗಳೂರಿಂದ ಉತ್ತರಕನ್ನಡ ಮಾರ್ಗವಾಗಿ ಪ್ರವಾಸಿವರನ್ನ ಕರೆದುಕೊಂಡು ಗೋವಾಕ್ಕೆ ಹೊರಟ್ಟಿತ್ತು ಎನ್ನಲಾಗಿದೆ. ಆದರೆ ಗೇರುಸೊಪ್ಪದಿಂದ ಎರಡು ಕಿ.ಮಿ ದೂರದಲ್ಲಿರುವಾಗ ಚಲಿಸುತ್ತಿದ್ದ ಬಸ್ ಹೆದ್ದಾರಿ ಪಕ್ಕದ ಧರೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ನಲ್ಲಿದ್ದ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನ ಹೊನ್ನಾವರದ 108 ನರ್ಸ್ ಗಜಲಕ್ಷ್ಮಿ, ಚಾಲಕ ಗೋಪಾಲ ನಾಯ್ಕ ಇವರು ಹೊನ್ನಾವರದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರಿಗೂ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ

