ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:
ಸರಕಾರದ ಕೆಲವೊಂದು ಸುತ್ತೋಲೆಗಳು ಜನಸಾಮಾನ್ಯರ ಜೀವನಕ್ಕೆ ಒಳ್ಳೆಯದಾದರೆ ಇನ್ನು ಕೆಲವು ಸುತ್ತೋಲೆಗಳು ಜನಸಾಮಾನ್ಯರ ಜೀವವೇ ಬಲಿಪಡೆಯುವ ಹಾಗೆ ಇರುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ರಾಜ್ಯ ಆರೋಗ್ಯ ಇಲಾಖೆ ಹೊರಡಸಿದ ಸುತ್ತೋಲೆ ಈಗ ರೋಗಿಗ ಪ್ರಾಣ ಹಿಂಡುತ್ತಿದೆ.

ಆರೋಗ್ಯ ಇಲಾಖೆಯ ಸುತ್ತೋಲೆ ಪ್ರಾಣ ಹೋಗುವ ರೋಗಿಗೆ ನೀರೆರೆಯದೆ ಜೀವವೇ ತೆಗೆಯುವ ಸುತ್ತೋಲೆ ಬಂದಿದೆ.ಯಾವುದೆ ಖಾಯಿಲೆಯಿಂದ ಸಿಟಿ ಸ್ಕ್ಯಾನ್ ಮಾಡಿಸಲು ಸರಕಾರಿ ಆಸ್ಪತ್ರೆಗೆ ಹೋದರೆ ಆಯುಷ್ಮಾನ ಭಾರತ ಯೋಜನೆಯಿಂದ ಅಪ್ರೂವಲ್ ಆಗಿ ಬಂದರೆ ಮಾತ್ರ ಆಯಾ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂಬ ಸುತ್ತೋಲೆ ಆರೋಗ್ಯ ಇಲಾಖೆ ಹೊರಡಿಸಿದೆ,

ಇಲ್ಲಿ ಒಮ್ಮೆ ರೋಗಿ ಸಿಟಿ ಸ್ಕ್ಯಾನ್ ಗೆ ಬಂದಮೇಲೆ ಆಯುಷ್ಮಾನ ಭಾರತ ಯೋಜನೆ ಕೌಂಟರ್ ಗೆ ತೆರಳಿ ಅಲ್ಲಿ ತಮ್ಮ ಹೆಸರನ್ನ ನೊಂದಾಯಿಸಿ ಬಳಿಕ ಇಲ್ಲಿಂದ ಬೆಂಗಳೂರಿಗೆ ರವಾನಿಸಲಾಗುತ್ತದೆ ಬಳಿಕ ಕೇಂದ್ರ ಕಚೇರಿಯಿಂದ ಅಪ್ರೂವಲ್ ಆಗಿ ಬಂದ ಬಳಿಕ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಲಾಗುತ್ತದೆ ಅಪ್ರೂವಲ್ ಆಗಿ ಬರಲು ಆಗಲೆ ಮೂರು,ನಾಲ್ಕು ತಾಸುಗಳ ಕಾಲ ತೆಗೆಯಬೇಕಾಗುತ್ತದೆ, ಬಳಿಕ ಸ್ಕ್ಯಾನ್ ಆದ ಮೇಲೆ ನಾಲ್ಕು ತಾಸುಗಳ ಬಳಿಕ ಸ್ಕ್ಯಾನ್ ರಿಪೋರ್ಟ್ ಬರುತ್ತದೆ ಅಲ್ಲಿಗೆ ಆ ರೋಗಿಯ ಪ್ರಾಣಕ್ಕೆ ಕುತ್ತು ಬರೋದ್ರಲ್ಲಿ ಎರಡು ಮಾತಿಲ್ಲ.

ಇಂತ ಕೆಟ್ಟ ಸುತ್ತೋಲೆಯನ್ನ ಆರೋಗ್ಯ ಇಲಾಖೆ ಹೊರಡಿಸಿದ್ದು ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಾರವಾರದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇರುವ ರೋಗಿಯನ್ನ ಕರೆತಂದು ಸಿಟಿ ಸ್ಕ್ಯಾನ್ ಮಾಡುವ ಸಂದರ್ಭದಲ್ಲಿ ನಡೆಸಿದ ಅಲೆದಾಟದಿಂದ ಸರಕಾರದ ಇಂತ ಕೆಟ್ಟ ಸುತ್ತೋಲೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.ಈಗಾಗಲೆ ಈ‌ ಸುತ್ತೋಲೆ ಹೊರಡಿಸಿ ಒಂದು ತಿಂಗಳು ಮುಗಿತಾ ಬಂದಿದೆ.ಡಿ 1ನೇ ತಾರೀಖಿನಿಂದ ಸುತ್ತೋಲೆ ಜಾರಿಗೆ ಬಂದಿದ್ದು ಕಾರವಾರದಲ್ಲಿ ರೋಗಿಗಳ ಪರದಾಟ ಹೇಳತೀರದ್ದಾಗಿದೆ…

ಇನ್ನೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೆ ಇರೋದು ಒಂದೆ ಒಂದು ಸ್ಕ್ಯಾನ್ ಅದು ಸಿಟಿ ಸ್ಕ್ಯಾನ್ ಸಿಟಿ ಸ್ಕ್ಯಾನ್ ಹೊರತು ಪಡಿಸಿ ಇಲ್ಲಿ ಯಾವುದೆ ದೊಡ್ಡ ಮಟ್ಟದ ವೈಜ್ಞಾನಿಕ ತಂತ್ರಜ್ಞಾನ ಇರುವ ಸ್ಕ್ಯಾನಿಂಗ್ ಯಂತ್ರಗಳು ಇಲ್ಲ.ಯಾರಿಗೆ ಎನೆ ಆರೋಗ್ಯ ಸಮಸ್ಯೆ ಆದರು ಕಾರವಾರದ ಕ್ರಿಮ್ಸ್ ಗೆ ಹೋಬೇಕಾಗಿದೆ ಆದರೆ ಇಲ್ಲಿಯೇ ಇಂತ ಕೆಟ್ಟ ವ್ಯವಸ್ಥೆ ಜಾರಿ ಆದರೆ ಬಡ ರೋಗಿಗಳ ಸ್ಥಿತಿ ಹೇಗೆ ಎಂಬ ಪ್ರಶ್ನೆ ಮೂಡಿದೆ.ಈಗಾಗಲೆ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಬಹು ವಿಸ್ತಾರ ಹೊಂದಿದ ಜಿಲ್ಲೆ, ದೂರ ದೂರದಿಂದ ಬರುವ ರೋಗಿಗಳು ಕಾರವಾರಕ್ಕೆ ಬಂದು ಪರದಾಟ ನಡೆಸಬೇಕಾದ ಸ್ಥಿತಿ ಬಂದೊದಗಿದೆ.

ಆಸ್ಪತ್ರೆ ಭಾಗ್ಯ ಇಲ್ಲದ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಆರೋಗ್ಯ ಇಲಾಖೆ ಹೊರಡಿಸಿದ ಸುತ್ತೋಲೆಯಿಂದ ರೋಗಿಗಳು ಸ್ಕ್ಯಾನ್ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ..

ಗಮನಿಸಿ