ಸುದ್ದಿಬಿಂದು ಬ್ಯೂರೋ
ಕಾರವಾರ : ಆತ್ಮಹತ್ಯೆ ನಾಟಕವಾಡಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪತ್ತೆಯಾಗಿದ್ದು, ಮಹಿಳೆಯನ್ನ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ ಹೇಳಿಕೆ ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕುಮಟಾದ ವಳ್ಳಿಯ ಹೆಡ್ ಬಂದರ್ ಕಡಲತೀರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಿವೇದಿತಾ ಎಂಬಾಕೆ ತನ್ನ ಇಬ್ಬರೂ ಮಕ್ಕಳನ್ನ ಪಟ್ಟಣ ಕುಮಟಾ ಪಿಕಪ್ ಬಸ್ ನಿಲ್ದಾಣದ ಬಳಿ ಬಿಟ್ಟು ಗೆಳತಿಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ನಿವೇದಿತಾ ಮಾಂಗಲ್ಯ ಸರ,ಕಾಲುಂಗುರ ಹಾಗೂ ಮೊಬೈಲ್ ನ್ನ ತನ್ನ ಸ್ಕೂಟಿಯೊಳಗೆ ಇಟ್ಟು, ಚುಡಿದಾರದ ವೆಲ್ ನ್ನ ಸಮುದ್ರಸಲ್ಲಿ ಎಸೆದು ನಾಪತ್ತೆಯಾಗಿದ್ದಳು. ಈಕೆಯ ವೆಲ್ ಸಮುದ್ರದಲ್ಲಿ ಪತ್ತೆಯಾಗಿರುವುದರಿಂದ ಆಕೆ ಸಮುದ್ರದಲ್ಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು.
ಆದರೆ ತನಿಖೆ ಚುರುಕುಗೊಳಿಸಿದ ಕುಮಟಾ ಸಿಪಿಐ ತಿಮ್ಮಪ್ಪ ನಾಯ್ಕ ಹಾಗೂ ಪಿಎಸ್ ಐ ನವೀನ್ ನಾಯ್ಕ ಸೇರಿ ಕುಮಟಾದ ಪೊಲೀರು ನಡೆಸಿದ ಮಿಂಚಿನ ಕಾರ್ಯಚರಣೆಯಿಂದ ಸಮುದ್ರದಲ್ಲಿ ಹಾರಿದ ನಾಟಕ ಮಾಡಿದ ಮಹಿಳೆ ಕೊನೆಗೂ ಹೊನ್ನಾವರ ಪ್ರಭಾತ ನಗರದ ಬಾಡಿಗೆ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಆದರೆ ಪತ್ತೆಯಾಗಿರುವ ಮಹಿಳೆಯನ್ನ ಬಂಧನ ಮಾಡದೆ ಆಕೆಯನ್ನ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ನಿವೇದಿತಾ ಭಂಡಾರಿ ಮದುವೆಯಾಗಿ ಗಂಡನೊಂದಿಗೆ ವಾಸವಾಗಿದ್ದು ಆತ್ಮಹತ್ಯೆ ನಾಟಕದ ಎರಡು ದಿನ ಮೊದಲು ತವರು ಮನೆ ತೋರಗೋಡ ಗ್ರಾಮಕ್ಕೆ ಮಕ್ಕಳೊಂದಿಗೆ ಹೋಗಿದ್ದಳು. ಮರುದಿನ ಅಲ್ಲಿಂದ ಮನೆಯಲ್ಲಿ ಪರಿಚಯಸ್ಥರನ್ನ ಭೇಟಿಯಾಗಿ ಬರುವುದಾಗಿ ತಿಳಿಸಿ ಮಕ್ಕಳನ್ನ ಸ್ಕೂಟಿಯಲ್ಲಿ ಕರೆದುಕೊಂಡು ಕುಮಟಾಕ್ಕೆ ಬಂದಿದ್ದು.ಮಗನಿಗೆ ಹೊಸ ಮೊಬೈಲ್ ಕೊಡಿಸಿ ನಂತರ ಮಕ್ಕಳನ್ನ ಪಿಕಪ್ ಬಸ್ ನಿಲ್ದಾಣದಲ್ಲಿ ಬಿಟ್ಟು ನಾಪತ್ತೆಯಾಗಿದ್ದಳು.
ಅಲ್ಲಿಂದ ನಾಪತ್ತೆ ಆಗಿದ್ದ ಮಹಿಳೆಗೆ ಆಟೋ ಚಾಲಕ ಲೋಕೇಶ್ ಎನ್ನುವವರು ಪ್ರಭಾತನಗರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು, ಮೇಲ್ನೋಟಕ್ಕೆ ಮಹಿಳೆ ಗಂಡನಿಗೆ ಬುದ್ಧಿ ಕಲಿಸಲು ನಾಟಕವಾಡಿರುವುದು ಬೆಳಕಿಗೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ತನಿಖೆ ಇನ್ನೂ ಮುಂದುವರೆದಿದ್ದು ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಕಾರವಾರದಲ್ಲಿ ಎಎಸ್ಪಿ ಜಯಕುಮಾರ ಹೇಳಿಕೆ ನೀಡಿದ್ದಾರೆ.
ಲೈಪ್ ಗರ್ಡ್ ಸಿಬ್ಬಂದಿಗಳಿಂದ ನಿರಂತರವಾಗಿ ನಡೆದಿದ್ದ ಹುಡುಕಾಟ
ಮಹಿಳೆ ಸಮುದ್ರದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸದ ದಿನದಿಂದ ಅಲ್ಲಿನ ಲೈಪ್ ಗಾರ್ಡ್ ಸಿಬ್ಬಂದಿಗಳಾಗಿರುವ ಉದಯ ಹರಿಕಾಂತ ಹಾಗೂ ಗಣೇಶ ಅಂಬಿಗ ಅವರು ನಿರಂತರವಾಗಿ ಹುಟುಕಾಟ ನಡೆಸುವಲ್ಲಿ ಹಗಲಿರುಳು ದುಡಿದಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಷುಗೆ ವ್ಯಕ್ತವಾಗಿದೆ.