ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ನವದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸರಣಿ ಮಾತುಕತೆ ನಡೆಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಂತಿಮ ಹಂತದ ಸಭೆ ಮುಕ್ತಾಯವಾದ ಬಳಿಕ ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈಗಾಗಲೇ ಕಾಂಗ್ರೇಸ್ ಹೈಕಮಾಂಡ ಸಚಿವರ ಪಟ್ಟಿಯನ್ನ ಅಂತಿಮಗೊಂಡಿದ್ದು, ಉತ್ತರಕನ್ನಡಕ್ಕೆ ಮಂಕಾಳ್ ವೈದ್ಯ ಅವರ ಹೆಸರು ಬಹುತೇಕ ಖಚಿತವಾಗಿದೆ.
೧೬ ಮಂದಿಗೆ ಸಚಿವ ಸ್ಥಾನ ನೀಡಿ ಉಳಿದ ನಾಲ್ಕು ಸ್ಥಾವನ್ನ ಬಾಕಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕೇಂದ್ರದ ನಾಯಕರು ಸಚಿವರ ಪಟ್ಟಿಯನ್ನ ಪೈನಲ್ ಮಾಡಿದ್ದಾರೆ ಎನ್ನಲಾಗಿದ್ದು, ಆದರೆ ಅದು ಇದುವರಗೆ ಸಿಎಂ ಕೈಗೆ ತಲುಪಿಲ್ಲ ಎನ್ನಲಾಗಿದೆ. ಇಂದು ರಾತ್ರಿಯೇ ಕೇಂದ್ರದ ನಾಯಕರು ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಸದ್ಯದ ಮಾಹಿತಿ ಪ್ರಕಾರ ರಾತ್ರಿಯೇ ಪಟ್ಟಿ ಬಿಡುಗಡೆಯಾಗದರೆ ನಾಳೆಯೇ ಪ್ರಮಾಣ ವಚನ ಸಾಧ್ಯತೆ ಇದ್ದು ಒಂದು ವೇಳೆ ಪಟ್ಟಿ ಇಂದು ಬಿಡುಗಡೆ ಆಗದೆ ಇದರೆ ಅಗಸ್ಟ್ ೨ಕ್ಕೆ ಕಾಂಗ್ರೇಸ್ ಹೈಕಮಾಂಡ ಸಚಿವ ಸಂಪುಟ ಪಟ್ಟಿ ಬಿಡುಗಡೆ ಮಾಡಲಿದ್ದು, ಅಗಸ್ಟ್ ೩ ಸೋಮವಾರದದ್ದು ಪ್ರಮಾಣವಚನ ನಡೆಯುವುದು ಬಹುತೇಕ ಪಕ್ಕಾಎನ್ನಲಾಗಿದೆ.

