ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ( ಎಸ್ ಐಆರ್) ಅಗತ್ಯ ದಾಖಲೆಗಳನ್ನ ಸಲ್ಲಿಸಲು ಅರಣ್ಯವಾಸಿಗಳು ನಿರ್ಲಕ್ಷಿಸಬಾರದು. ಮತದಾರರ ಹಕ್ಕು ತಪ್ಪಿದ್ದಲ್ಲಿ ಭಾರತದ ಪೌರತ್ವ ನಷ್ಟವಾಗುವುದು. ಪೌರತ್ವ ನಷ್ಟದಿಂದ ಅರಣ್ಯ ಭೂಮಿ ಹಕ್ಕನ್ನು ಪಡಿಯಲು ವಂಚಿತರಾಗುತ್ತೀರಿ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಯಲ್ಲಾಪುರ ತಾಲೂಕಿನ ಹಾಸಣಗಿ ಮತ್ತು ಕಂಪ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯವಾಸಿಗಳಿಂದ ದಶಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ಹಾಸಣಗಿಯ ಶಿರನಾಳ ಗಣಪತಿ ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ ಜಾಗೃತ ಕಾರ್ಯಕ್ರಮದ ಸಂದರ್ಭದಲ್ಲಿ ಹೇಳಿದರು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶ್ಕರಣೆಯು ಪ್ರಜೆಯ ಭಾರತದ ಪೌರತ್ವವನ್ನ ಮತ್ತು ಹಕ್ಕನ್ನು ನಿರ್ಧರಿಸುವುದರಿಂದ ಭಾರತದ ಪೌರತ್ವದಿಂದ ವಂಚಿತರಾದರೆ, ಅರಣ್ಯವಾಸಿಗಳಿಗೆ ದೇಶದ ಭೂಮಿ ಹಕ್ಕು ಪಡಿಯಲು ಸಾಧ್ಯವಾಗದು.ಆದ್ದರಿಂದ ಪರಿಶ್ಕರಣೆ ಸಂಧರ್ಭದಲ್ಲಿ ಚುನಾವಣೆ ಆಯೋಗ ದೃಡೀಕರಿಸಿದ ೧೧ವಿವಿಧ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕೆಂದು ಅವರು ಹೇಳಿದರು.
ಪೌರತ್ವ ನಷ್ಟದಿಂದ ಭೂಮಿ ಹಕ್ಕನ್ನಲ್ಲದೇ,ಗ್ಯಾರಂಟಿ, ವಿಧವ ವೇತನ , ವೃದ್ಯಾಪ್ಯ ವೇತನ, ಸಹಾಯಧನ, ಬ್ಯಾಂಕ್ ಸಾಲ, ರೇಷನ, ರೈತರಿಗೆ ಸಹಾಯ ಮುಂತಾದ ಸೌಲಭ್ಯದಿಂದ ವಂಚಿತರಾಗುವ ಪ್ರಸಂಗ ಬರಬಹುದು ಎಂದು ಅವರು ಹೇಳಿದರು.ಪ್ರತಿಯೊಬ್ಬ ಅರಣ್ಯವಾಸಿಯು ಸಾಕಷ್ಟು ಪ್ರಮಾಣದಲ್ಲಿ, ದೀರ್ಘಕಾಲದ ಹಾಗೂ ಹಣ್ಣು ಹಂಪಲ ಗಿಡಗಳನ್ನ ನೆಡುವ ದಿಸೆಯಲ್ಲಿ ಕಾರ್ಯಪ್ರವರ್ತರಾಗಬೇಕು. ಗ್ರೀನ್ ಕಾರ್ಡ ಪ್ರಮುಖರ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯವು, ಅರಣ್ಯವಾಸಿಗಳೊಂದಿಗೆ ಪರಿಣಾಮಕಾರಿ ಕಾರ್ಯ ಜಿಲ್ಲಾದ್ಯಂತ ಜರುಗುತ್ತಿರುವುದು ವಿಶೇಷ ಎಂದು ಈ ತಿಳಿಸಿದರು.
ಕಾರ್ಯಕ್ರಮದ ನೇತೃತ್ವವನ್ನ ಪ್ರಧಾನ ಸಂಚಾಲಕ ಚಂದ್ರಶೇಖರ ಪೂಜಾರಿ ಹಾಸಣಗಿ , ವಿನೋದ ತಳೇಕರ, ನರಸಿಂಹ ನಾಯ್ಕ ಬಿಳಕೆ, ಮಹೇಶ ಮರಾಠಿ ಶಿರನಾಲ, ಚಂದ್ರಕಾಂತ ಮರಾಠಿ ಶಿರನಾಲ, ಪ್ರಶಾಂತ ಮಾದನಸರ, ರಾಮಚಂದ್ರ ಹೆಗಡೆ ಬಿಳಕೆ, ಚಂದ್ರಕಾಂತ ಬೈದಕೋಡ, ಕೃಷ್ಣ ನಾಯ್ಕ ಕೆಮ್ಮಣ್ಣಿ, ವಿಠ್ಠಲ ಪೂಜಾರಿ ಕಂಪ್ಲಿ, ವೆಂಕಟರಮಣ ಹೆಗಡೆ ಬಿಳಕೆ , ನಾಗೇಂದ್ರ ಮಾಣಿ ಕುಣಬಿ, ಸದನಾಂದ ಪೂಜಾರಿ, ರವಿ ಗಣಪತಿ ಸಿದ್ದಿ ಮಂಚಿಕೇರಿ ಮುಂತಾದವರು ನೇತೃತ್ವವಹಿಸಿದರು. ಕಾನೂನು ಘಟಕ ಸ್ಥಾಪನೆ: ಅರಣ್ಯವಾಸಿಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶ್ಕರಣೆ ( ಎಸ್ ಐಆರ್ ) ಮಾಹಿತಿ ಮತ್ತು ಕಾನೂನು ಅಂಶಗಳ ಕುರಿತು ಸಾರ್ವತ್ರೀಕವಾಗಿ ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕರ್ಯಾಲಯದಲ್ಲಿ ಕಾನೂನು ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು

