ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ಕರಾವಳಿ ಭಾಗಕ್ಕೂ ತಟ್ಟಿದ್ದು, ಕುಮಟಾದಲ್ಲಿ LPG ಅಭಾವ ತೀವ್ರಗೊಂಡಿದೆ. (LPG Price Today, Gas Cylinder Rate India) ಇದರ ಪರಿಣಾಮವಾಗಿ ರಿಕ್ಷಾ ಚಾಲಕರು ಮತ್ತು ವಾಹನ ಮಾಲಕರು ಗ್ಯಾಸ್ ಪಡೆಯಲು ಬಂಕ್ಗಳಲ್ಲಿ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿರುವ ದೃಶ್ಯಗಳು ಕಂಡುಬಂದಿದೆ.
ನಿನ್ನೆಯಿಂದ ಅಳ್ವೆಕೋಡಿ ಗ್ಯಾಸ್ ಬಂಕ್ನಲ್ಲಿ LPG ತುಂಬಿಸಿಕೊಳ್ಳಲು ಬಂದ ವಾಹನಗಳು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತಿದ್ದು, ಚಾಲಕರು ಬಹಳ ಸಮಯ ಕಾದು ಕಾದು ಗ್ಯಾಸ್ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. (Fuel Price Hike, Auto LPG Cost) ಈ ಹಿನ್ನೆಲೆ ರಿಕ್ಷಾ ಚಾಲಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಜನತೆಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕಾದ ಪ್ರಧಾನಿ ಮನ್ ಕೀ ಬಾತ್ ಮಾಡುತ್ತಿದ್ದಾರೆ. (Government Schemes India, Subsidy LPG) ನಾವಿಲ್ಲಿ ರೈಸ್ ಬಾತ್ ಕೂಡ ಮಾಡಲಾಗದೆ ಪರದಾಡುತ್ತಿದ್ದೇವೆ. ಇವರನ್ನು ಇನ್ನೂ ನಂಬಿದರೆ ನಮ್ಮ ಭವಿಷ್ಯ ಕತ್ತಲಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಮಂತ್ರಿ Narendra Modi ನೇತೃತ್ವದ ಸರ್ಕಾರ ದೇಶದಲ್ಲಿ ಎಲ್ಲವೂ ಸುಗಮವಾಗಿದೆ ಎಂದು ಹೇಳುತ್ತಿದ್ದರೂ, ವಾಸ್ತವದಲ್ಲಿ LPG ಅಭಾವದಿಂದ ಜನ ಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. (India Economy News, Inflation India) ಗ್ಯಾಸ್ ದರ ಏರಿಕೆಯಿಂದಾಗಿ ರಿಕ್ಷಾ ಬಾಡಿಗೆ ದರ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. (Cost of Living India, Fuel Inflation Impact) ಇದರಿಂದ ಪ್ರಯಾಣಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
“ನಮ್ಮಗೆ ಜೀವನ ಸಾಗಿಸಲು ಕಷ್ಟಪಡುತ್ತಿದ್ದೇವೆ, ಆದರೆ ಸರ್ಕಾರದ ಕ್ರಮಗಳು ಜನರ ಸಂಕಷ್ಟ ನಿವಾರಣೆಗೆ ಸಹಕಾರಿಯಾಗುತ್ತಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕೆಲವು ಚಾಲಕರ ಅಭಿಪ್ರಾಯದಲ್ಲಿ, ಗುಜರಾತ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಕೂಡ LPG ಅಭಾವದ ಸಮಸ್ಯೆ ಕಾಣಿಸಿಕೊಂಡಿದ್ದು, ಪರಿಸ್ಥಿತಿ ದಿನೇದಿನೇ ಗಂಭೀರವಾಗುತ್ತಿದೆ. (Energy Crisis, Gas Supply Shortage India) ಆದರೂ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನವನ್ನು ಕರಾವಳಿ ಭಾಗದ ನಾಗರಿಕರು ಹೊರಹಾಕಿದ್ದಾರೆ.

