ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಕಳೆದ 25 ವರ್ಷಗಳಿಂದ ಯಲ್ಲಾಪುರದಲ್ಲಿ ವಿಜೃಂಭಣೆಯಿಂದ ನಡೆದುಕೊಂಡು ಬಂದ ಯುಗಾದಿ ಉತ್ಸವವು ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಐತಿಹಾಸಿಕ ಉತ್ಸವವಾಗಿ ಗುರುತಿಸಿಕೊಂಡಿದೆ. ಈ ಉತ್ಸವದ 26ನೇ ವರ್ಷದ ಅಧ್ಯಕ್ಷರಾಗಿ ವಿಶಾಲ ವಿಜಯ ವಾಳಂಬಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ವಿಶಾಲ ವಿಜಯ ವಾಳಂಬಿ ಅವರು, “ಕಳೆದ 25 ವರ್ಷಗಳಿಂದ ಸಂಭ್ರಮದಿಂದ ನಡೆದುಕೊಂಡು ಬಂದ ಯಲ್ಲಾಪುರ ಯುಗಾದಿ ಉತ್ಸವವನ್ನು ನನ್ನ ಅವಧಿಯಲ್ಲಿಯೂ ಸಹ ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ಯಶಸ್ವಿಯಾಗಿ ನಡೆಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘಟಕರು, ಸದಸ್ಯರು, ಯುವಕರು ಹಾಗೂ ಸಾರ್ವಜನಿಕರ ಬೆಂಬಲವೇ ಉತ್ಸವದ ಶಕ್ತಿ,” ಎಂದು ತಿಳಿಸಿದರು.
ಯುಗಾದಿ ಉತ್ಸವ ಸಮಿತಿ ಸದಸ್ಯರು ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ಹಿರಿಯರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಯಲ್ಲಾಪುರ ಯುಗಾದಿ ಉತ್ಸವವು ಪ್ರತಿ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪರ ಚಟುವಟಿಕೆಗಳು ಹಾಗೂ ಸಂಪ್ರದಾಯಬದ್ಧ ಆಚರಣೆಗಳ ಮೂಲಕ ಜನಮನ ಸೆಳೆಯುತ್ತಿದ್ದು, ಈ ಬಾರಿ ಕೂಡ ಭರ್ಜರಿಯಾಗಿ ಆಚರಣೆಗೆ ಮಾಡಲು ಸಮಿತಿ ಮುಂದಾಗಿದೆ..
ಇದನ್ನೂ ಓದಿ/ಮಿರ್ಜಾನ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ : ಮಂಗಳೂರು ಮೂಲದ ನಾಲ್ವರು ಬಚಾವ್


