ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ :ತಾಲೂಕಿನ ಅವರಗುಪ್ಪಾ ಗ್ರಾಮದಲ್ಲಿ ನಡೆದ ವಸಂತ್ ನಾಯ್ಕ್ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು,ಪ್ರಕರಣದ ಕೇಂದ್ರ ಬಿಂದುವಾಗಿ ಸುಚಿತ್ರಾ ಎಂಬ ಸುಂದರಾಗಿ ಮಹಿಳೆಯ ಹಿನ್ನೆಲೆ ಇದೀಗ ಪೊಲೀಸರ ತನಿಖೆಯಲ್ಲಿ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ಸುಚಿತ್ರಾ ಅಪ್ರಾಪ್ತ ವಯಸ್ಸಿನಲ್ಲೇ ಪ್ರೀತಿಗೆ ಬಿದ್ದಿದ್ದಳು. ಚಿಕ್ಕ ವಯಸ್ಸಿನಲ್ಲೇ ಜೀವನದ ದಾರಿ ತಪ್ಪಿದ ಸುಚಿತ್ರಾ, ಸುಮಾರು 17ನೇ ವಯಸ್ಸಿನಲ್ಲೇ ಬೆಂಗಳೂರಿನಲ್ಲಿ ಹೋಟೆಲ್ ಉದ್ಯೋಗ ಮಾಡುತ್ತಿದ್ದ ಮಹೇಶ್ ನಾಯ್ಕನ ಪ್ರೀತಿಗೆ ಬಿದ್ದಿದ್ದಳು ಎನ್ನಲಾಗಿದೆ. ಜಾತ್ರೆಯಲ್ಲಿ ಪರಿಚಯವಾಗಿ ಆ ಸಂಬಂಧ ಪ್ರೀತಿಯಾಗಿ ಬೆಳೆಯಿತು. ಹದಿನೆಂಟು ವರ್ಷ ತುಂಬುವ ಮುನ್ನವೇ ಮಹೇಶ್ ಜೊತೆ ಓಡಿಹೋಗಿ ಮದುವೆಯಾಗಿದ್ದ ಸುಚಿತ್ರಾ, ಮದುವೆಯಾದ ಕೆಲವೇ ದಿನಗಳಲ್ಲಿ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿದ್ದಳು ಎಂಬ ಆರೋಪಗಳು ಕೇಳಿಬರುತ್ತಿವೆ. ಮಗನ ಭವಿಷ್ಯ ಚೆನ್ನಾಗಿರಲಿ ಎಂಬ ಉದ್ದೇಶದಿಂದ ವಸಂತ್ ನಾಯ್ಕ್ ಹಾಗೂ ಮಹೇಶ್‌ಗೆ ಕುಟುಂಬಸ್ಥರು ಆಸ್ತಿಯ ಭಾಗವೊಂದನ್ನು ನೀಡಿದ್ದರು ಎನ್ನಲಾಗಿದೆ.

ಆದರೆ ಕುಟುಂಬದಿಂದ ಬೇರ್ಪಟ್ಟ ಬಳಿಕ ಸುಚಿತ್ರಾ ಜೀವನ ಸಂಪೂರ್ಣವಾಗಿ ಬದಲಾಗಿದ್ದು, ಹಲವಾರು ಯುವಕರೊಂದಿಗೆ ಸಂಪರ್ಕ ಹೊಂದಿದ್ದಳು ಎಂಬ ಗಂಭೀರ ಆರೋಪಗಳು ತನಿಖೆಯಲ್ಲಿ ಹೊರಬರುತ್ತಿವೆ. ಗಂಡ ಮಹೇಶ್ ಬೆಂಗಳೂರಿನಲ್ಲಿ ವಾಸವಾಗಿದ್ದಾಗ, ಗಂಡನ ಕಣ್ಣೆದುರೇ ಅಲ್ಲದೆ ಕಣ್ಣ ಹಿಂದೆಯೂ ಸುಚಿತ್ರಾ ಹಲವು ನಾಟಕೀಯ ಆಟಗಳನ್ನು ಆಡಿದ್ದಳು ಎನ್ನಲಾಗಿದೆ.

ಪ್ರೀತಿಸಿ ಮದುವೆಯಾಗಿ ಕೊನೆಗೆ ಗಂಡನಿಗೇ ಮೋಸ ಮಾಡಿದಳು ಎಂಬ ಆರೋಪಗಳು ಇದೀಗ ಪ್ರಕರಣದ ಭಾಗವಾಗಿದ್ದು, ಅಡ್ಡ ದಾರಿಯಲ್ಲಿ ಹಣ ಸಂಪಾದನೆಗೂ ಸುಚಿತ್ರಾ ತೊಡಗಿಕೊಂಡಿದ್ದಳು ಎಂಬ ಅನುಮಾನಗಳು ಬಲವಾಗುತ್ತಿವೆ. ಈ ಎಲ್ಲಾ ಅಂಶಗಳು ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ ಲಿಂಕ್‌ ಇರ ಬಹುದೇ ಎನ್ನುವ ಬಗ್ಗೆ  ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣದ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೆಸರಲಿ ಬದಲಿಸಿಕೊಂಡಿದ್ದ ಸುಚಿತ್ರ
ತನ್ನ ಬಣ್ಣದ ಆಟಕ್ಕಾಗಿ ಹೆಸರನ್ನೆ ಬದಲಿಸಿಕೊಂಡು ಓಡಾಡುತ್ತಿದ್ದಳು ಎನ್ನಲಾಗಿದೆ. ಆಕೆಯ ದಾಖಲೆಯಲ್ಲಿ ಸುರೇಖಾ ಎಂದು ನಮೂದಾಗಿದೆ ಎನ್ನಲಾಗಿದ್ದು, ಆದರೆ‌ ಈಕೆ ಹೆಸರನ್ನೆ ಬದಲಿಸಿಕೊಂಡು ಓಡಾಡುತ್ತಿದ್ದಳು ಎನ್ನಲಾಗಿದೆ.ಅಷ್ಟೆ ಅಲ್ಲದೆ ತನ್ನ ಮದುವೆಯೇ ಆಗಿಲ್ಲ.‌ಜೊತೆಗೆ ಇರೋರು ತನ್ನ ಅಕ್ಕನ ಮಕ್ಕಳು ಅಂತಾ ಹೇಳಿಕೊಂಡು ಯಾಮಾರಿಸುತ್ತಿದ್ದಳು ಎನ್ನಲಾಗಿದೆ.

ಇದನ್ನೂ ಓದಿ/ರಾಜ್ಯವನ್ನೇ ಬೆಚ್ಚಿಬೀಳಿಸಿದ ‘ರೀಲ್ಸ್ ರಾಣಿ’ ಸಿದ್ದಾಪುರದ ಸುಂದರಿ ಕಥೆ