ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದುರಿಗೆ ಬಂದ ಕಾಡು ಪ್ರಾಣಿಯನ್ನು ತಪ್ಪಿಸಲು ಹೋಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಂಕೋಲಾ ತಾಲೂಕಿನ ಮೊಗಟಾ ಗ್ರಾಮದ ಸಮೀಪ ನಡೆದಿದೆ.
ಇದನ್ನೂ ಓದಿ/ಮಟ್ಕಾ ಸಂಘಕ್ಕೆ ಭರ್ಜರಿ ಆದಾಯ : ಮೊದಲ ದಿನವೇ ಯಶಸ್ವಿ ಕಂಡ ‘ಮಂಜ,ದಾಸರ ತಂಡ’
ಘಟನೆಯಲ್ಲಿ ಬಸಯ್ಯ ಹಿರೇಮಠ (45) ಗಾಯಗೊಂಡಿದ್ದಾರೆ. ಅವರು ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಸರಣ ವಿಭಾಗದ ಉತ್ತರ ಕನ್ನಡ ಜಿಲ್ಲೆಯ ಮುಖ್ಯಸ್ಥರಾಗಿದ್ದಾರೆ. ಪತ್ರಿಕೆ ಪ್ರಸರಣ ಸಂಬಂಧ ಬೆಳಿಗ್ಗಿನ ಜಾವ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ಮೊಗಟಾ ಸಮೀಪ ಇವರು ಚಲಿಸುತ್ತಿದ್ದ ಬೈಕ್ ಎದುರಿಗೆ ಅಚಾನಕ್ ಕಾಡು ಪ್ರಾಣಿಯೊಂದು ಎದುರಾಗಿದೆ ಎನ್ನಲಾಗಿದೆ. ಅದನ್ನು ತಪ್ಪಿಸಲು ಹೋಗಿ ಬೈಕ್ ಪಲ್ಟಿಯಾಗಿದ್ದು, ಹೆಲ್ಮೇಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿದೆ.
ತಕ್ಷಣ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.




