ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲೇ ನಡೆದ ಭೀಕರ ಹಲ್ಲೆ ಪ್ರಕರಣದಲ್ಲಿ, ತಮ್ಮನನ್ನು ಕೊಲೆ ಯತ್ನದಿಂದ ತಪ್ಪಿಸಲು ಹೋಗಿ ಅಣ್ಣನೇ ಕೊಲೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.

ಮಹೇಶ್ ನಾಯ್ಕ್ ಹಾಗೂ ವಸಂತ ನಾಯ್ಕ್ ಅಣ್ಣ–ತಮ್ಮಂದಿರಾಗಿದ್ದು, ಮಹೇಶ್ ನಾಯ್ಕ್ ಪತ್ನಿ ಸುಚಿತ್ರಾಳೊಂದಿಗೆ ಕಮಲಾಕರ ಸ್ವಾಮಿ ಭಟ್ ಎಂಬಾತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.ಈ ವಿಚಾರ ತಿಳಿದ ಬಳಿಕ ಸುಚಿತ್ರಳ ಕಡೆಯವರು  ಮಹೇಶ್ ನಾಯ್ಕ್ ಎಂಬುವವರನ್ನ ಮುಗಿಸಲು ಮುಂದಾಗಿದ್ದರು.

ಈ ವೇಳೆ ಮಹೇಶ್ ನಾಯ್ಕ್ ಅವರನ್ನು ರಕ್ಷಿಸಲು ಅಣ್ಣ ವಸಂತ ನಾಯ್ಕ್ ಮಧ್ಯ ಪ್ರವೇಶಿಸಿದಾಗ, ಆತನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದಿದ್ದು, ಗಂಭೀರ ಗಾಯಗೊಂಡ ವಸಂತ ನಾಯ್ಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮ್ಮನನ್ನು ಉಳಿಸಲು ಹೋಗಿ ಅಣ್ಣನ  ಕೊಲೆಯಾದ ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ.

ಘಟನೆ ನಡೆದ ಕೇವಲ 24 ಗಂಟೆಗಳ ಒಳಗೆ ಸಿದ್ದಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ,ಪ್ರಮುಖ ಆರೋಪಿಗಳಾದ ಸುಚಿತ್ರ,ಆಕೆಯ ತಂದೆ ಲೋಕನಾಥ, ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಕಮಲಾಕರ ಸ್ವಾಮಿ ಭಟ್ ಸೇರಿದಂತೆ ಇನ್ನೂ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ/ಮಟ್ಕಾ ಸಂಘಕ್ಕೆ ಭರ್ಜರಿ ಆದಾಯ : ಮೊದಲ ದಿನವೇ ಯಶಸ್ವಿ ಕಂಡ ‘ಮಂಜ,ದಾಸರ ತಂಡ’