ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: IRB ಕಂಪನಿ ಗುತ್ತಿಗೆ ಪಡೆದಿರುವ ಕರಾವಳಿ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಆಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇತ್ತೀಚಿನ ದಿನಗಳಲ್ಲಿ ಹಲವೆಡೆ Speed breaker ಹೆಚ್ಚಾಗಿರುವುದು ವಾಹನ ಸವಾರರಿಗೆ ಅಪಘಾತದ ಭೀತಿ ಎದುರಾಗಿದೆ..
ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಈ ಸಮಸ್ಯೆಯಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇನ್ನೂ ನಿತ್ಯವೂ ಒಂದಲ್ಲ ಒಂದು ಕಾಯಿಲೆಗೆ ಒಳಾಗಿರುವ ರೋಗಿಗಳನ್ನ ಅಂಬುಲೆನ್ಸ್ , (Ambulance,) ಅಥವಾ ಇನ್ಯಾವುದೋ ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಇದರಿಂದಾಗಿ ಹೆದ್ದಾರಿ ಗುತ್ತಿಗೆ ಪಡೆದ ಕಂಪನಿ ದಿನಕ್ಕೊಂದು ಕಡೆಯಲ್ಲಿ Speed breaker ಹಾಕುತ್ತಿರುವುದರಿಂದ ಆ ವಾಹನ ಚಾಲಕರಿಗೆ ಒಮ್ಮೆ ತಿಳಿಯದೆ ಒಂದೆ ವೇಗದಲ್ಲಿ Speed breaker ಹತ್ತಿಸುವುದರಿಂದ ವಾಹನದಲ್ಲಿನ ರೋಗಿಗಳಿಗ ಸಮಸ್ಯೆ ಉಂಟಾಗಿರುವ ಅನೇಕ ಘಟನೆಗಳಿವೆ..
ವೇಗದಲ್ಲಿ ಸಾಗುವ ವೇಳೆ Speed breaker ಗೆ ಸಿಲುಕಿದರೆ ವಾಹನ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದ್ದು, ಅಪಘಾತ ಸಂಭವಿಸುವ ಭೀತಿಯೂ ಇದೆ. ಕಾರು, ಬಸ್ ಹಾಗೂ ಲಾರಿ ಸೇರಿದಂತೆ ಭಾರೀ ವಾಹನಗಳಿಗೂ ಹೆದ್ದಾರಿಯಲ್ಲಿ ಅವಶ್ಯಕವಿಲ್ಲದ ಸ್ಥಳದಲ್ಲಿ Speed breaker ಹಾಕಿರುವುದು ತೊಂದರೆ ನೀಡುತ್ತಿದೆ, ವಾಹನಗಳ ಸಸ್ಪೆನ್ಶನ್ ಹಾಗೂ ಟೈರ್ಗಳಿಗೆ ಹಾನಿಯಾಗುತ್ತಿರುವುದಾಗಿ ಚಾಲಕರು ಆರೋಪಿಸಿದ್ದಾರೆ.
ಮಳೆಗಾಲದ ಸಮಯದಲ್ಲಿ ರಸ್ತೆ ಮೇಲಿನ Speed breaker ನೀರಿನಿಂದ ತುಂಬಿಕೊಂಡು ಕಾಣಿಸದ ಸ್ಥಿತಿಯಲ್ಲಿ ಇರುವುದು ಅಪಾಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ರಾತ್ರಿ ವೇಳೆ ಸರಿಯಾದ ಬೆಳಕು ಇಲ್ಲದ ಕಾರಣ ಚಾಲಕರಿಗೆ Speed breaker ಅಂದಾಜು ಆಗದೆ, ಅಕಸ್ಮಾತ್ ಬ್ರೇಕ್ ಹಾಕುವ ಸಂದರ್ಭಗಳಲ್ಲಿ ಹಿಂಬದಿಯಲ್ಲಿ ಇನ್ನೊಂದು ವಾಹ ಎದುರಿನ ವಾಹನಕ್ಕೆ ಡಿಕ್ಕಿಹೊಡೆದು ಅಪಘಾತ (Accident)ಉಂಟಾಗುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, Speed breaker ಸಂಪೂರ್ಣವಾಗಿ ಸರಿಪಡಿಸಿ, ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಅದರಲ್ಲೂ ಕುಮಟಾ ತಾಲೂಕಿನಲ್ಲೇ ಅತೀ ಹೆಚ್ಚು ಕಡೆ Speed breaker ನಿರ್ಮಾಣ ಮಾಡಲಾಗಿದ್ದು, ಅಪಘಾತ ಹೆಚ್ಚಾಗಲು ಇದು ಸಹ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಕರಾವಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈಗಾಗಲೇ ಹಾಕಲಾಗಿರುವ Speed breaker ಬಗ್ಗೆ ಪರಿಶೀಲನೆ ನಡೆಸಿ ಮುಂದೆ ಆಗಬಹುದಾಗಿರುವ ಅನಾಹುತವನ್ನ ತಪ್ಪಿಸಬೇಕಿದೆ. ಒಂದೊಮ್ಮೆ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡದೆ IRB ಕಂಪನಿ ಮಾಡಿರುವುದೆ ಸರಿ ಎಂದು ಸುಮ್ಮನಾದರೆ. ಅದೆಷ್ಟೋ ಜನ ಕೈ-ಕಾಲು ಮುರಿದುಕೊಳ್ಳುವುದಷ್ಟೆ ಅಲ್ಲದೆ ಜೀವ ಕಳೆದುಕೊಳ್ಳಂದು ಅನೇಕ ಕುಟುಂಬಗಳು ಅನಾಥವಾಗಬೇಕಾದ ಪರಿಸ್ಥಿತಿ ಎದುರಾದರೂ ಯಾರೂ ಕೂಡ ಅಚ್ಚರಿ ಪಡಬೇಕಾಗಿಲ್ಲ.
ಇದನ್ನೂ ಓದಿ/ಮಹಿಳಾ ಸಬಲೀಕರಣದ ಮೂಲಕ ಗ್ರಾಮೀಣ ಸಮಾಜಕ್ಕೆ ಶಿಸ್ತು ನೀಡಿದ ಧರ್ಮಸ್ಥಳ ಯೋಜನೆ : ರೂಪಾಲಿ ನಾಯ್ಕ


