ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕಾರವಾರ ಮೆಡಿಕಲ್ ಕಾಲೇಜು ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆ (ಕ್ರಿಮ್ಸ್ ) ಮಾಜಿ ನಿರ್ದೇಶಕ  ಡಾ.ಗಜಾನನ ನಾಯಕ  ತಮ್ಮ  ಕಾರ್ಯಾವಧಿಯಲ್ಲಿ ವೈದ್ಯ ವಿದ್ಯಾರ್ಥಿಯೊಬ್ಬರ  ಮೇಲೆ ಎಸಗಿದ ಪರಿಶಿಷ್ಟ ಜಾತಿ ದೌರ್ಜನ್ಯದ ಆರೋಪವು ತನಿಖೆಯಲ್ಲಿ  ದೃಢಪಟ್ಟಿದ್ದರಿಂದ ಏಳು ದಿನಗಳ ಒಳಗಾಗಿ ಶಿಸ್ತಿನ ಕ್ರಮ  ಜರುಗಿಸಿ, ವರದಿ ನೀಡುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ದಿನಾಂಕ 3.9.2025 ರಂದು ಸರ್ಕಾರಕ್ಕೆ ಪತ್ರ ಬರೆದು ಗಡುವು ನೀಡಿದೆ.

2025ಮೇ ತಿಂಗಳಲ್ಲಿ ಎಟಿಆರ್ (ಆಕ್ಷನ್ ಟೇಕನ್ ರಿಪೋರ್ಟ್)ನ್ನು ನಿಗದಿತ ಅವಧಿ ಮೀರಿದರೂ  ಗಜಾನನ ನಾಯಕ ಮೇಲೆ ಕ್ರಮದ‌ ವರದಿ ಸಲ್ಲಿಕೆ ಆಗದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಇದೇ ದಿನಾಂಕ  3ಸೆಪ್ಟೆಂಬರ್ ರಂದು ಪತ್ರ ಬರೆದಿದೆ..

2025ರ ಮೇ 5ರಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯ ವಡ್ಡೆಪಳ್ಳಿ ರಾಮಚಂದ್ರ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯ ಕುರಿತು Action Taken Report (ATR) ಇನ್ನೂ ಆಯೋಗಕ್ಕೆ ಸಲ್ಲಿಕೆಯಾಗಿಲ್ಲ ಎಂದು ಪತ್ರದಲ್ಲಿ  ವಿವರಿಸಲಾಗಿದೆ. 2025ರ ಜೂನ್ 20ರಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಪತ್ರ ಕಳುಹಿಸಲಾಗಿತ್ತು. ಆದರೆ ವರದಿ ಲಭ್ಯವಾಗದ ಕಾರಣ 2025ರ ಸೆಪ್ಟೆಂಬರ್ 3ರಂದು ಮತ್ತೊಮ್ಮೆ ಸ್ಮರಣ ಪತ್ರ ಕಳುಹಿಸಲಾಗಿದೆ. ಈ ವರದಿಯನ್ನು ಪತ್ರ ಸ್ವೀಕರಿಸಿದ 7 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.

ಈ ಪ್ರಕರಣವು ಕಾರವಾರದ ಕ್ರಿಮ್ಸ  ವೈದ್ಯಕೀಯ ಕಾಲೇಜಿನ ಹೌಸ್ ಡಾಕ್ಟರ್ ಡಾ. ಸಂದೀಪ್ ಎನ್. ಅವರು , 2023ರ ಜೂನ್ 12 ರಂದು ಕ್ರಿಮ್ಸ ನಿರ್ದೇಶಕ  ಡಾ. ಗಜಾನನ್ ನಾಯಕ್ ವಿರುದ್ಧ  ನ್ಯಾಶನಲ್ ಕಮಿಷನ್ ಫಾರ್ ಸೆಡ್ಯುಲ್ಡ ಕಾಸ್ಟ ಗೆ
ದೂರು ಸಲ್ಲಿಸಿದ್ದರು.ಕಾರವಾರ ಮೆಡಿಕಲ್ ಕಾಲೇಜು  ನಿರ್ದೇಶಕರು  ಎಸ್ಸಿ ಎಸ್ಪಿ   ವಿದ್ಯಾರ್ಥಿಗಳ ಮೇಲೆ ಕಿರುಕುಳ ನೀಡುತ್ತಿದ್ದಾರೆ.  ಹಾಗೂ ಅವರಿಗೆ  ಸರ್ಕಾರದ ಸೌಲಭ್ಯಗಳನ್ನು ನೀಡದೆ ಭೇದಭಾವ ತೋರಿಸುತ್ತಿದ್ದಾರೆಂದು  ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ 2024ರ ಮಾರ್ಚ್ 12ರಂದು ವರದಿ ಸಲ್ಲಿಕೆಯಾಗಿದ್ದು, ಅದರ ಪ್ರತಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ದೂರುದಾರರಿಗೆ ಕಳುಹಿಸಿದೆ.ಈಗಾಗಲೇ ನಿವೃತ್ತ ನಿರ್ದೇಶಕ ಗಜಾನನ ನಾಯ್ಕ ಅವರ ನಿವೃತ್ತಿ ‌ವೇತನ ಸೌಲಭ್ಯ ತಡೆಹಿಡಿಯಲಾಗಿದೆ.

ಇದನ್ನೂ ಓದಿ : ಬೆಣ್ಣೆ ಹೊಳೆ ಫಾಲ್ಸ್‌ನಲ್ಲಿ ವಿದ್ಯಾರ್ಥಿ ನಾಪತ್ತೆ