ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ (ಸುಭಾಸ್ ರಸ್ತೆ, ಕುಮಟಾ) ಗುಮಾಸ್ತ ಹುದ್ದೆ ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿಯಲ್ಲಿ‌ ಅಕ್ರಮ ನಡೆದಿದೆ ಎನ್ನುವ ಬಗ್ಗೆ ಗಂಭೀರ ಆರೋಪ ಕೇಳಿ‌ ಬರುತ್ತಿದೆ, ಸಂದರ್ಶನಕ್ಕೂ ಮುನ್ನವೆ ಲಂಚ ಪಡೆದು ಸಿಬ್ಬಂದಿಗಳನ್ನ ನೇಮಕ ಮಾಡಿದ್ದಾರೆನ್ನಲಾಗತ್ತಾ ಇದೆ…

ಅಭ್ಯರ್ಥಿಗಳಿಂದ ಗುಮಾಸ್ತ ಹುದ್ದೆಗೆ ರೂ.1180/- ಮತ್ತು ಅಟೆಂಡರ್ ಹುದ್ದೆಗೆ ರೂ.590/- ಅರ್ಜಿ ಶುಲ್ಕ ವಸೂಲಾತಿ ನಡೆಸಲಾಗಿತ್ತು. ಹುದ್ದೆಗಳ ನೇಮಕಾತಿಗಾಗಿ ಗುಮಾಸ್ತ ಹುದ್ದೆಗೆ 200ಅಂಕಗಳ ಲಿಖಿತ ಪರೀಕ್ಷೆ ನಡೆಸಲಾಗುತ್ತಿತ್ತು. ಫಲಿತಾಂಶದ ಆಧಾರದ ಮೇಲೆ ಶೇ. 85% ಅಂಕದ ಮಾನದಂಡದಲ್ಲಿ ಅರ್ಹತೆ ಪಡೆದವರಿಂದ 1:5 ಅನುಪಾತದಲ್ಲಿ ಮೌಖಿಕ ಸಂದರ್ಶನ (ಶೇ.15 ಅಂಕ) ಲನಡೆಸಿ ಅಂತಿಮ ಆಯ್ಕೆಯನ್ನು ಮಾಡಲಾಗುವುದು ಎಂದು ನಿರ್ಧರಿಸಿತ್ತು.

ಅಟೆಂಡರ್ ಹುದ್ದೆಗೆ 100 ಅಂಕಗಳ ಲಿಖಿತ ಪರೀಕ್ಷೆಯ ಫಲಿತಾಂಶ ಆಧಾರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಬೇಕೆಂದು ಸ್ಪಷ್ಟಪಡಿಸಲಾಗಿತ್ತು. ಇದಕ್ಕೆ ಅನುಸಾರ, 18-05-2025ರಂದು ಡಾ. ಎ.ವಿ. ಬಾಳಿಗಾ ಕಾಮರ್ಸ್ ಕಾಲೇಜು, ಕುಮಟಾ ಇಲ್ಲಿ ಲಿಖಿತ ಪರೀಕ್ಷೆ ನಡೆಸಲಾಯಿತು. ಫಲಿತಾಂಶವನ್ನು ಕ್ರಮ ಸಂಖ್ಯೆ ಆಧಾರದಲ್ಲಿ ಪ್ರಕಟಿಸಲಾಯಿತು.

ಆದರೆ ಇದೀಗ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯ ಆರೋಪಗಳು ಗಂಭೀರವಾಗಿ ಕೇಳಿ ಬಂದಿದೆ, ಗುಮಾಸ್ತ ಹುದ್ದೆಗೆ ಬೇಕಾದ 8 ಲಅಭ್ಯರ್ಥಿಗಳ ಹೆಸರುಗಳು ಲಿಖಿತ ಪರೀಕ್ಷೆಯ ಫಲಿತಾಂಶಕ್ಕೂ ಮುನ್ನವೇ ನಿಗದಿಯಾಗಿದ್ದು, ತನ್ನ ಬಳಿ ಕೋಟಿ ಕೋಟಿ ಹಣ ಇದೆ ಎಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ಎದೆ ಉಬ್ಬಿಸಿ ಓಡಾಡುತ್ತಿದ್ದ ಮಾಹಾನ್ ವ್ಯಕ್ತಿಯೇ ಸಮೀತಿ ಸದಸ್ಯರ ಗಮಕ್ಕೂ ತರದೆ  ಕಾಸಿಗಾಗಿ ಕೈ ಚಾಚಿ ಸಿಬ್ಬಂದಿಗಳನ್ನ ಆಯ್ಕೆ ಮಾಡಲಾಗಿದೆ ಎನ್ನುವುದು ಈಗ ತಾಲೂಕಿನಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಎಂಟು ಮಂದಿ ಸಿಬ್ಬಂದಿಗಳ ಹೆಸರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದೆಷ್ಟೋ ಮಂದಿ ಕಳೆದ ವಾರದ ಹಿಂದೆ‌ ತಮ್ಮದೊಂದು ಅಭ್ಯರ್ಥಿ ಇದ್ದಾರೆ‌.‌ ಆಯ್ಕೆ ಮಾಡೋದಕ್ಕೆ ಆಗಬಹುದಾ ಅಂತಾ ಸಂಬಂಧಿಸಿದ ಕೆಲವರಲ್ಲಿ ಕೇಳಿದ್ದಾರೆನ್ನಲಾಗಿದ್ದು, ಆ ವ್ಯಕ್ತಿ ಅಗಲ್ಲೆ ಎಲ್ಲಾ ಮುಗಿದು ಹೋಗಿದೆ.‌ಈಗ ಏನು ಮಾಡೋದಕ್ಕೆ ಸಾಧ್ಯ ಇಲ್ಲ ಅಂತಾ ಹೇಳಿರುವ ಆಡಿಯೋ ಸಹ ಹರಿದಾಡತ್ತಾ ಇದೆ ಎನ್ನಲಾಗಿದೆ.ಅವರ ಆ ಆಡಿಯೋ ಸಂಭಾಷಣೆಯನ್ನ ಕೇಳಿಸಿಕೊಂಡವರು ಹೇಳತ್ತಾ ಇರೋದು ಒಂದೇ ಮಾತು. ಸಂದರ್ಶನಕ್ಕೆ ಮೊದಲೆ‌ ಎಲ್ಲರ ಆಯ್ಕೆ ಆಗಿದೆ ಎನ್ನುವುದನ್ನ,.‌ ಇದರಿಂಮಂಡ ಳಿಳಿ ಸಿಬ್ಬಂದಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾಗತ್ತಾ ಇದೆ. ಒಂದು ವೇಳೆ ಸಾಮಾಜಿಕ ಜಾಲತಾಣದಲ್ಲಿ‌ ಹರಿದಾಡಿದ ಹೆಸರಿನವರು ಆಯ್ಕೆ ಆಗಿದ್ದೆ ಆದಲ್ಲಿ ಲಂಚ ಬಿಟ್ಡು ಇಲ್ಲಿ ಬೇರೆ ಯಾವ ಮಾನದಂಡವೂ ನಡೆದಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ..

ಸಂದರ್ಶನ‌ ಪ್ರಕ್ರಿಯೆ ಕೇವಲ ನಾಟಕವಾಗಿದ್ದು, ಫಲಿತಾಂಶ ಪೂರ್ವನಿರ್ಧಾರಿತವಾಗಿದೆ ಎಂಬ ಆಕ್ರೋಶ ಸ್ಪರ್ಧಾತ್ಮಕ ಅಭ್ಯರ್ಥಿಗಳಲ್ಲಿ ವ್ಯಕ್ತವಾಗಿದೆ.‌ಆಡಳಿತ ಮಂಡಳಿಯ ಉದ್ದೇಶಪೂರ್ವಕ ಕುತಂತ್ರವಾಗಿದ್ದು. ಅರ್ಹ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿ, ಹಣದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎನ್ನುವ ಬಗ್ಗೆ ಗಂಭೀರ ಆರೋಪ ಇದೆ. ಈ ಬಗ್ಗೆ ಕಾನೂನು ಹೋರಾಟಕ್ಕೆ ವಿದ್ಯಾರ್ಥಿಗಳು ಮುಂದಾಗಿದ್ದಾರೆನ್ನಲಾಗಿದೆ..

ಇದನ್ನೂ ಓದಿ : ಸೇತುವೆ ಪಕ್ಕದಲ್ಲಿ ಭೂ ಕುಸಿತ