ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕೇಂದ್ರದ ಮಾಜಿ ಸಚಿವ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಅನಂತಕುಮಾರ ಹೆಗಡೆ ಕಾರ್ ಓವರ್ ಟೇಕ್ ಪ್ರಕರಣದಲ್ಲಿ ಅನ್ಯಕೋವಿನ ಕುಟಂಬದ ಮೇಲೆ ಹಲ್ಲೆ ನಡೆಸಿದ್ದಾರೆನ್ನುವ ಬಗ್ಗೆ ಸಂಬಂಧಿಸಿ ಗನ್ ಮ್ಯಾನ್ ವಿರುದ್ಧ ಸಹ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿ(ಗನ್ಮ್ಯಾನ್) ಶ್ರೀಧರ ತೆಗ್ಗಿನ ಅವರನ್ನ ಈ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ ಮಾಡಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಆದೇಶ ಹೊರಡಿಸಿದ್ದಾರೆ.
ಶ್ರೀಧರ ತೆಗ್ಗಿನ ಅವರು ಸಶಸ್ತ್ರ ಮಿಸಲು ಪಡೆಯ ಸಿಬ್ಬಂದಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ಅನಂತಕುಮಾರ ಹೆಗಡೆ ಅವರ ಕಾರ್ ಓವರ್ ಟೇಕ್ ಸಂಬಧಿಸಿದ ನಡೆದ ಗಲಾಟೆಯಲ್ಲಿ ಶ್ರೀಧರ ತೆಗ್ಗಿನ ವಿರುದ್ಧ ಕೂಡ ದಾಬಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಅನಂತಕುಮಾರ ಹೆಗಡೆ ಅವರ ಭದ್ರತಾ ಸಿಬ್ಬಂಧಿಯಾಗಿದ್ದ ಶ್ರೀಧರ ತೆಗ್ಗಿನ ಅವರನ್ನ ಮುಂದಿನ ಆದೇಶದವರಗೆ ಅಮಾನತ್ ಮಾಡಿ ಆದೇಶಿಸಲಾಗಿದೆ.
ಇದನ್ನೂ ಓದಿ : ಎಸಿ ಕಾರು ಬಿಟ್ಟು ಪಿಂಕ್ ಆಟೋದಲ್ಲಿ ಡಿಸಿ ಸಂಚರಿಸಿದ್ದು ಯಾಕೆ..?