ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕಳೆದ ನಾಲ್ಕು ತಿಂಗಳಿಂದ ಖಾಲಿ ಇದ್ದ ಶಿರಸಿ ತಾಲೂಕು ಕಚೇರಿಯ ತಹಶೀಲ್ದಾರ್ ಹುದ್ದೆಗೆ ಖಾಯಂ ತಹಶಿಲ್ದಾರರ ನೇಮಕಕ್ಕೆ ಆಗ್ರಹಿಸಿ , ಬಿಜೆಪಿ ಗ್ರಾಮೀಣ ಮಂಡಳ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಸೋಮವಾರ ಕಾರವಾರದಲ್ಲಿ ಪ್ರತಿಭಟನೆ ನಡೆಯಿತು. ಸುರಿವ ಮಳೆಯಲ್ಲಿ ಸಹ ಪ್ರತಿಭಟನೆ ಮುಂದುವರಿದಿತ್ತು. ಇದಕ್ಕೂ ಮುನ್ನ ಶಿರಸಿಯಲ್ಲಿ ತಹಶಿಲ್ದಾರರ ನೇಮಕಕ್ಕೆ ಮನವಿ ಸಹ ಅರ್ಪಿಸಲಾಗಿತ್ತು.

ಸೋಮವಾರ ಕಾರವಾರ ಚಲೋ ನಡೆಯಿತು. ಶಿರಸಿಗೆ ತಹಶಿಲ್ದಾರರ ನೇಮಖ್ಕೆ ಜಿಲ್ಲಾಧಿಕಾರಿಗಳನ್ನು ಕಂಡು ಮನವಿ ಅರ್ಪಿಸಲಾಯಿತು‌. ಮನವಿ ಆಲಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ತಕ್ಷಣದಿಂದಲೇ (23-06-2025 ) ಜಾರಿಯಾಗುವಂತೆ, ಶಿರಸಿಯ ಉಪ ತಹಶೀಲ್ದಾರ್ ಆಗಿದ್ದ ರಮೇಶ ಹೆಗಡೆ ಅವರನ್ನು, ಗ್ರೇಡ್ 1 ತಹಶಿಲ್ದಾರರಾಗಿ, (ಪ್ರಭಾರ) ನೇಮಕ ಮಾಡಿ ಆದೇಶ ನೀಡಿದರು.

ಈ ಹೋರಾಟದಲ್ಲಿ ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ರೈತಮೋರ್ಚಾದ ರಮೇಶ ನಾಯ್ಕ ಕುಪ್ಪಳ್ಳಿ‌ ಸೇರಿದಂತೆ ಗ್ರಾಮೀಣ ಮಂಡಲದ 50 ಕ್ಕೂ ಹೆಚ್ಚಿನ ಬಿಜೆಪಿಗರು ಪಾಲ್ಗೊಂಡಿದ್ದರು.

ಇದನ್ನೂ ಓದಿ :ಜೋಗನ ಹಕ್ಕಲು ಫಾಲ್ಸ್ ನಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿಹೋದ ಯುವಕ