ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಈಗಾಗಲೇ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದ್ದು,ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ವಾಹನ ಸವಾರರು ಗುಡ್ಡದ ಬದಿಯಲ್ಲಿ ವಾಹನಗಳನ್ನ ಪಾರ್ಕಿಂಗ್ ಮಾಡುವುದಾಗಲಿ ಅಥವಾ ಸಾರ್ವಜನಿಕರು ನಿಂತುಕೊಳ್ಳುವಂತಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರೀಯಾ ಆದೇಶಿಸಿದ್ದಾರೆ.

ಕಳೆದ ವರ್ಷ ಸುರಿದ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ಅಂಚಿನ ಗುಡ್ಡ ಕುಸಿತ ಉಂಟಾಗಿ, ಹೆದ್ದಾರಿ ಬದಿಯ ಗುಡ್ಡದ ಪಕ್ಕದಲ್ಲಿ ಸಿಲ್ಲಿಸಿದ ವಾಹನ ಚಾಲಕರು ಸೇರಿ ಅಲ್ಲೇ ಇದ್ದ ಹೊಟೇಲ್ ಮಾಲೀಕರು ಹಾಗೂ ಗ್ರಾಹಕರು ಸೇರಿದಂತೆ ಒಟ್ಟು ಹನ್ನೊಂದು ಮಂದಿ ದಾರುಣ ಸಾವನ್ನಪ್ಪಿದ್ದರು. ಆ ಘಟನೆಯ ಬಳಿಕ ಇದೀಗ ಜಿಲ್ಲಾಡಳಿತ ಜನತೆಯ ಹಿತದೃಷ್ಠಿಯಿಂದ ಈ ಆದೇಶ ಮಾಡಿದ್ದಾರೆ‌‌..

ಶಿರೂರು ಘಟನೆ ಬಳಿಕ ಜಿಲ್ಲೆಗೆ ಆಗಮಿಸಿದ ತಜ್ಞನರು ಶಿರೂರು ಗುಡ್ಡ ಸೇರಿದಂತೆ ಜಿಲ್ಲೆಯ ಇನ್ನೂ 150 ಪ್ರದೇಶದಲ್ಲಿ ಗುಡ್ಡ ಕುಸಿಯು ಬಗ್ಗೆ ಎಚ್ಚರಿಕೆಯನ್ನ ನೀಡಿ ಹೋಗಿದ್ದಾರೆ.ಇದೀಗ ಮತ್ತೆ ಮಳೆಗಾಲ ಆರಂಭವಾಗಿದ್ದು,ಆರಂಭದಲ್ಲೆ ಕೆಲವು ಕಡೆ ಸಣ್ಣಪುಟ್ಟ ಗುಡ್ಡಕುಸಿತಗಳು ಉಂಟಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿರುವ ಹೆದ್ದಾರಿ ಸೇರಿದಂತೆ ಯಾವುದೇ ರಸ್ತೆಗಳ ಗುಡ್ಡದ ಅಂಚಿನಲ್ಲಿ ಯಾರೂ ಕೂಡ ತಮ್ಮ ವಾಹನಗಳನ್ನ ಪಾರ್ಕಿಂಗ್ ಮಾಡದಂತೆ ಹಾಗೂ ಗುಡ್ಡದಿಂದ ಬರು ಝರಿ ನೀರಿನಿಂದ ಸ್ನಾ‌ನ ಮಾಡುವ ಸಾಹನಕ್ಕೆ ಇಳಿಯದಂತೆ ಆದೇಶಿಸಿದ್ದಾರೆ. ಹೀಗಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಇದನ್ನ ತಪ್ಪದೆ ಪಾಲಿಸಬೇಕಿದೆ…

ಇದನ್ನೂ ಓದಿ