ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ; ಪಹಲ್ಗಾಮ್ ದಾಳಿ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ರವೀಂದ್ರ ನಾಥ್ ಟಾಗೂರ್ ಕಡಲತೀರದಲ್ಲಿ ಮೇ 4 ರಿಂದ ನಡೆಸಲು ಉದ್ದೇಶಿಸಲಾಗಿದ್ದ ಕರಾವಳಿ ಉತ್ಸವವನ್ನ ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಈ ಸಂಬಂಧ ಈಗಾಗಲೆ ಜಿಲ್ಲಾಡಳಿತದಿಂದ ಸರಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ ಎನ್ನಲಾಗಿದ್ದು, ಹೀಗಾಗಿ ಸರಕಾರದ ಅದೇಶಕ್ಕಾಗಿ ಕಾಯಲಾಗುತ್ತಿದ್ದು, ಬಹುತೇಕ ಉತ್ಸವ ಕೈ ಬಿಡುವುದು ಪಕ್ಕಾ ಆಗಿರುವಂತಿದೆ..ಈ ಬಾರಿ ಮೇ 4 ರಿಂದ ಐದು ದಿನಗಳ ಕಾಲ ಅದ್ದೂರಿಯಾಗಿ ಕರಾವಳಿ ಉತ್ಸವ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನ ಸಹ ಮಾಡಿಕೊಂಡಿತ್ತು. ಆದರೆ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನ ಹತ್ಯೆ ಮಾಡಿದ ನಂತರದಲ್ಲಿ ಸದ್ಯ ದೇಶದಲ್ಲಿ ಯುದ್ದದ ಕಾರ್ಮೋಡ ಉಂಟಾಗಿದೆ. ಇನ್ನೊಂದು ಕಡೆ ಮೇಲೆ ಮೊದಲ ವಾರದಲ್ಲಿ ವ್ಯಾಪಕವಾಗಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ಮೇಲೆ ಸದ್ಯ ಈ ಭಾರಿ ನಡೆಸಲು ಉದ್ದೇಶಿಸಲಾಗಿರುವ ಕರಾವಳಿ ಉತ್ಸವವನ್ನ ಕೈ ಬಿಡಲಾಗಿದೆ..
ಕಾರ್ಯಕ್ರಮಕ್ಕೆ ಸೋನು ನಿಗಮ್, ಇಂಡಿಯನ್ ಐಡಲ್ ಖ್ಯಾತಿಯ ಮೊಹಮದ್ ದಾನಿಶ್, ಮಿಕಾ ಸಿಂಗ್, ಅನನ್ಯ ಭಟ್ ಮತ್ತು ತಂಡ ಹಾಗೂ ಶಂಕರ್ ಮಹಾದೇವನ್ ಅವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು,